ಫೆ. 8-9 : ಉತ್ರಂಬೆ ಶ್ರೀ ಅರಸು ಉಳ್ಳಾಕುಲು ಪರಿವಾರದ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ

0

ನಾಲ್ಕೂರು ಗ್ರಾಮದ ನಡುಗಲ್ಲು ಉತ್ರಂಬೆ ಬೈಲಿನಲ್ಲಿರುವ ಶ್ರೀ ಅರಸು ಉಳ್ಳಾಕಲು ಮತ್ತು ಪರಿವಾರ ದೈವಗಳ ಪ್ರತಿಷ್ಠ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವ ಫೆಬ್ರವರಿ ೮ ರಿಂದ ೯ ರವರೆಗೆ ನಡೆಯಲಿದೆ. ಫೆಬ್ರವರಿ ೫ರಂದು ಕ್ಷೇತ್ರದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ನಾಗತಂಬಿಲ ಮತ್ತು ಅರಸು ಉಳ್ಳಾಕುಲು ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ತಂತ್ರಿ ಬ್ರಹ್ಮಶ್ರೀ ಪ್ರಸಾದ ಪಾಂಗಣ್ಣಾಯ ಕುವೆತ್ತೋಡಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಜನವರಿ ೩೧ರಂದು ಬೆಳಿಗ್ಗೆ ೭:೦೦ ಗಂಟೆಗೆ ಗೊನೆ ಮುಹೂರ್ತ, ನಂತರ ನಾಗತಂಬಿಲ, ಗಣಹೋಮ ಶ್ರೀ ಅರಸು ಉಳ್ಳ ಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠ ವಾರ್ಷಿಕೋತ್ಸವ ನಂತರ ಪ್ರಸಾದ ವಿತರಣೆ, ಜನವರಿ ೮ ರಂದು ರಾತ್ರಿ ಗಂಟೆ ೭ ಕ್ಕೆ ದೈವಗಳ ಭಂಡಾರ ತೆಗೆದು, ಜನವರಿ ಒಂಬತ್ತರಂದು ಶ್ರೀ ಅರಸು ಉಳ್ಳಾಕುಲು ದೈವದ ನೇಮ, ಓಲೆಸಿರಿ ದೈವದ ಸೇವೆ, ಪ್ರಸಾದ ವಿತರಣೆ, ನಂತರ ಶ್ರೀ ಪುರುಷದೈವ ಮತ್ತು ಚಾಮುಂಡಿ ದೈವದ ನೇಮ ನಡೆಯಲಿದೆ. ಅಪರಾಹ್ನ ಪಂಜುರ್ಲಿ, ಅಜ್ಜಿಭೂತ, ಜಾಗದಗುಳಿಗ, ಮಂತ್ರ ಗುಳಿಗ ದೈವಗಳ ನೇಮೋತ್ಸವ ನಡೆದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. (ವರದಿ : ಡಿ.ಎಚ್.)