ಜ.29: ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ಸುವರ್ಣ ಸಂಭ್ರಮ ಭಜನೋತ್ಸವದ ಪ್ರಯುಕ್ತ ಹಸಿರುವಾಣಿ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

0

ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸುವರ್ಣ ಸಂಭ್ರಮದ ಭಜನೋತ್ಸವವು ಫೆ.1ರಿಂದ ಫೆ.3ರವರೆಗೆ ಜರುಗಲಿದ್ದು, ಈ ಪ್ರಯುಕ್ತ ಹಸಿರುವಾಣಿ ಸಮರ್ಪಣೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮವು ಜ.29ರಂದು ಜರುಗಲಿದೆ.
ಪೂರ್ವಾಹ್ನ 9ರಿಂದ ಐದು ಕೇಂದ್ರಗಳಿಂದ ಸಿಂಗಾರಿಮೇಳದೊಂದಿಗೆ ಹಸಿರುವಾಣಿ ಮೆರವಣಿಗೆಯು ಶ್ರೀ ಆತ್ಮಾರಾಮ ದೇವರ ಸನ್ನಿಧಿಗೆ ಸಾಗಿ ಬರಲಿದೆ. ಬಳಿಕ ಉಗ್ರಾಣ ತುಂಬಿಸಲಾಗುವುದು.
ಪೂರ್ವಾಹ್ನ 11ರಿಂದ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ವಿಜಯ ಸರಸ್ವತಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಗೌರವ ಕಾರ್ಯಕ್ರಮ ನಡೆಯಲಿದ್ದು , ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ತಳೂರು ಅವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ಸುಳ್ಯ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ ರೈ ದುಗ್ಗಲಡ್ಕ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಅಪರಾಹ್ನ 1ರಿಂದ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ ಶ್ರೀ ರಾಮಾಶ್ವಮೇದ ಜರುಗಲಿದೆ.