ಸುಳ್ಯ: ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ಜ.24 ರಂದು ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ನಡೆಯಿತು. ವಿಕಲಚೇತನ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಕ್ಯಾಂಪ್ ನಲ್ಲಿ ತಾಲೂಕು ಪಂಚಾಯತ್ ಎಂ ರ್ ಡಬ್ಲ್ಯೂ ಚಂದ್ರ ಶೇಖರ್, ನಗರ ಪಂಚಾಯತ್ ಯು ರ್ ಡಬ್ಲ್ಯೂ ಪ್ರವೀಣ್ ನಾಯಕ್, ಆರೋಗ್ಯ ಇಲಾಖೆಯ ಬಸವ ರಾಜ್, ವಿ ರ್ ಡಬ್ಲ್ಯೂ ರವರಾದ ಪುಷ್ಪ ಶ್ರೀ, ಕೃಷ್ಣ ಪ್ರಸಾದ್, ಷಣ್ಮುಖ, ರಂಜಿನಿ ದಿನೇಶ, ಆಶೀಸ್, ಹರ್ಷಿತ್, ವೆಂಕಟ್ರಮಣ, ಜಗದೀಪ್, ಹರಿಣಿ, ಸವಿತ, ದಾದಿ ನಯನ, ಮತ್ತಿತರರು ಹಾಜರಿದ್ದರು.

ವೈದ್ಯಾಧಿಕಾರಿ ಡಾಕ್ಟರ್ ಕರುಣಾಕರ್ ನೇತೃತ್ವದಲ್ಲಿ ಎಲ್ಲಾ ತಜ್ಞ ವೈದ್ಯರು ಹಾಜರಿದ್ದು ಸಹಕಾರ ನೀಡಿದರು. ಹಲವಾರು ವಿಶೇಷ ಚೇತನರು ಇದರ ಪ್ರಯೋಜನ ಪಡೆದರು