ಕುತ್ಯಾಳ ಕೇಪಣ್ಣ ಗೌಡರಿಗೆ ಶ್ರದ್ಧಾಂಜಲಿ ಸಭೆ

0

ಸುಳ್ಯ ತಾಲೂಕು ಕನಕಮಜಲು ಗ್ರಾಮದ ಕುತ್ಯಾಳ ಕೇಪಣ್ಣ ಗೌಡರು ಜನವರಿ 1ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಜ.26ರಂದು ಸುಳ್ಯದ ಅಂಬಟಡ್ಕ ಗಿರಿದರ್ಶಿನಿ ಸಭಾ ಭವನದಲ್ಲಿ ನಡೆಯಿತು. ಗೋಪಾಲಕೃಷ್ಣ ಕುತ್ಯಾಳ ಮೃತರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಈ ಸಂಧರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಕಮಲಾಕ್ಷಿ, ಪುತ್ರ ವಂಶಿತ್ ಕುತ್ಯಾಳ, ಪುತ್ರಿ ಶ್ರೀಮತಿ. ಜಶ್ಮಿತಾ ಲೊಕೇಶ್ ಪೇರಾಲು, ಕುಟುಂಬಸ್ಥರು, ನೆಂಟರಿಷ್ಟರು ಉಪಸ್ಥಿತರಿದ್ದರು. ಆಗಮಿಸಿದ ನೂರಾರು ಜನರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.