![](https://sullia.suddinews.com/wp-content/uploads/2023/01/7cb61857-ab9b-4b7d-bd20-de5e191735e7-1024x770.jpg)
ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ 74ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಂತೋಡು-ತೋಡಿಕಾನ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿದರು. ಬಳಿಕ ಮಾತನಾಡಿ ವಿಶ್ವಗುರು ಭಾರತ ಪರಮ ವೈಭವದತ್ತ ಸಾಗುತ್ತಿದೆ ಸಾಮಾಜಿಕ ರಾಜಕೀಯ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಭಾರತ ನಿರ್ವಹಣೆ ಮತ್ತು ನಾಯಕತ್ವ ವಹಿಸಿಕೊಂಡು ಮುನ್ನೆಡೆಯುತ್ತಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಉತ್ತಮ ಶಿಕ್ಷಕರಾದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಕೆ ಆರ್ ಗಂಗಾಧರ, ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಎಸ್, ಮುಖ್ಯೋಪಾಧ್ಯಾಯರಾದ ಸೀತಾರಾಮ ಎಂ ಕೆ, ಉಪನ್ಯಾಸಕರು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಶಿಕ್ಷಕರು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮತ್ತು ಶಾಲಾ ಆವರಣ ಸ್ವಚ್ಛತೆ ಮಾಡಲಾಯಿತು.
![](https://sullia.suddinews.com/wp-content/uploads/2023/01/16a57fca-d5c4-4fd6-a5d9-6e12126813cd-770x1024.jpg)
![](https://sullia.suddinews.com/wp-content/uploads/2023/01/b87d0b33-a09f-4017-8611-6575922cbc4e-1024x770.jpg)
![](https://sullia.suddinews.com/wp-content/uploads/2023/01/0f12b82c-18d8-4431-9060-4c97ecdfe60d-1024x770.jpg)
![](https://sullia.suddinews.com/wp-content/uploads/2023/01/7cb61857-ab9b-4b7d-bd20-de5e191735e7-1024x770.jpg)