ಜಾಲ್ಸೂರು : ಪಯಸ್ವಿನಿ ಪ್ರೌಢ ಶಾಲಾ ಅಭಿವೃದ್ಧಿಗೆ ಕ್ಯಾಪ್ಟನ್ ಜನಾರ್ದನ ರಾವ್ ರಿಂದ ಐವತ್ತು ಸಾವಿರ ದೇಣಿಗೆ

0

ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ಮಹಾ ಪೋಷಕ ಕ್ಯಾಪ್ಟನ್ ಜನಾರ್ದನ ರಾವ್ ಬೈತ್ತಡ್ಕ ಅವರು ಶಾಲಾಭಿವೃದ್ಧಿಗೆ ರೂ.50,000 ಸಾವಿರವನ್ನು ದೇಣಿಗೆ ನೀಡಿದ್ದಾರೆ.
ದೇಣಿಗೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ( ರಿ ) ಜಾಲ್ಸೂರು ಇದರ ಮಹಾಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ.ದೇರಣ್ಣ ಗೌಡ ಅಡ್ಡಂತಡ್ಕ ಮತ್ತು ಶಾಲಾ ಸಂಚಾಲಕ ಜಾಕೆ ಸದಾನಂದ ಅವರಿಗೆ ಹಸ್ತಾಂತರಿಸಿದರು.
ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕತ್ತಾರ್ ಇಬ್ರಾಹಿಂ, ಖಜಾಂಜಿ ಶ್ರೀನಿವಾಸ ಭಟ್ ಡಿ., ಜತೆಕಾರ್ಯದರ್ಶಿ ಶ್ಯಾಂಕುಮಾರ್ ಎಂ.ಎಸ್, ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.