ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಕುರಿತು ಪೂರ್ವಭಾವಿ ಸಭೆ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವದ ಕುರಿತು ಪೂರ್ವಭಾವಿ ಸಭೆಯು ದೇವಸ್ಥಾನದ ಶ್ರೀ ಕಾರ್ತಿಕೇಯ ಸಭಾಭವನದಲ್ಲಿ ಫೆ. 2ರಂದು ನಡೆಯಿತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಗಿರಿಧರ ಗೌಡ ವಿನೋಬನಗರ, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಗೋಪಾಲ ಕಾನ ಅಡ್ಕಾರು, ಜಯಪ್ರಕಾಶ್ ಕೊಡೆಂಚಿಕಾರ್, ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಮಣಿಯಾಣಿ ಮರಸಂಕ, ಕಾರ್ಯಾಲಯ ಮತ್ತು ಆರ್ಥಿಕ ಸಮಿತಿ ಸದಸ್ಯ ಮೋಹನ ನಂಗಾರು, ಉಪಾಧ್ಯಕ್ಷರುಗಳಾದ ಮುರಳೀಧರ ಅಡ್ಕಾರು, ನಿವೃತ್ತ ಎ.ಎಸೈ ಭಾಸ್ಕರ ಅಡ್ಕಾರು, ಪಾಕಶಾಲೆ ಸಮಿತಿ ಸದಸ್ಯ ತಿರುಮಲೇಶ್ವರ ಕುತ್ಯಾಳ, ಜಾತ್ರೋತ್ಸವ ಸಮಿತಿ ಕೋಶಾಧ್ಯಕ್ಷ ಭಾಸ್ಕರ ಅಡ್ಕಾರುಬೈಲು, ಕಾರ್ಯಾಲಯ ಸಮಿತಿಯ ಹರ್ಷಿತ್ ಪೇರಾಲು ಉಪಸ್ಥಿತರಿದ್ದರು.