‘ಕಾಯೋ ಹರಿಯೇ’ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಭಕ್ತಿಗೀತೆ ಆಲ್ಬಂ ಬಿಡುಗಡೆ

0

ಪರಮ್ ಕ್ರಿಯೇಶನ್ಸ್ ಅರ್ಪಿಸುವ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಭಕ್ತಿಗೀತೆ ಆಲ್ಬಂ ‘ಕಾಯೋ ಹರಿಯೇ’ ಬಿಡುಗಡೆ
ಬಿಡುಗಡೆಗೊಂಡಿತು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಕೃಷ್ಣ ಕಾಮತ್, ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್ ಸೇರಿ ಬಿಡುಗಡೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಟಿ.ಕುಸುಮಾಧರ, ಆರ್ಥಿಕ‌ ಸಮಿತಿಯ ಸಂಚಾಲಕ ನಾರಾಯಣ ಕೇಕಡ್ಕ, ಗಿರೀಶ್ ಡಿ.ಎಸ್, ಆನಂದ ನಡುಬೆಟ್ಟು, ಪರಮ್ ಸುಳ್ಯ, ಕೃಷ್ಣ ಬೆಟ್ಟ ಉಪಸ್ಥಿತರಿದ್ದರು. ಪರಮ್‌ ಕ್ರಿಯೇಶನ್ಸ್ ಪ್ರಸ್ತುತ ಪಡಿಸುವ ಆಲ್ಬಂನ ಗೀತೆಯ ಸಾಹಿತ್ಯವನ್ನು ಉದಯಭಾಸ್ಕರ್ ಸುಳ್ಯ ರಚಿಸಿದ್ದಾರೆ. ವಾಮನ್ ಕಾರ್ಕಳ ಸಂಗೀತ ನೀಡಿರುವ ಗೀತೆಯನ್ನು ಚೈತ್ರಾ ಗಾಣಿಗ ಕಲ್ಲಡ್ಕ ಹಾಡಿದ್ದಾರೆ‌.ಸಂದೇಶ್ ಬಾಬಣ್ಣ ಧ್ವನಿಮುದ್ರಣ ಹಾಗು ಪರಮ್‌ ಮತ್ತು ವಿನಯ್ ವೀವ್ಸ್ ವೀಡಿಯೋ ನಿರ್ವಹಿಸಿದ್ದಾರೆ. ಸುರೇಂದ್ರನ್ ಜಟ್ಟಿಪಳ್ಳ ಪ್ರಾಯೋಜಿಸಿದ್ದಾರೆ.