ಅರಂತೋಡು ರಾಷ್ಟ್ರೀಯ ಹೆದ್ದಾರಿ ಬಳಿಯ ಶುಂಠಿಯಡ್ಕ ಬಳಿ ಬುಡ ಸಮೇತ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ರಸ್ತೆ ತಡೆಯಾಗಿ ಪ್ರಯಾಣಿಕರು ಒಂದು ತಾಸು ಪರದಾಡಿದ ಘಟನೆ ಅರಂತೋಡಿನಿಂದ ವರದಿಯಾಗಿದೆ .
ಹೊಸ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ತಂತಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತಡೆಯಾಯಿತು. ಪೇರಡ್ಕ ಉರೂಸ್ ಕಾರ್ಯಕ್ರಮ ಮುಗಿಸಿ ಅರಂತೋಡು ಮನೆಗೆ ತೆರಳುತ್ತಿದ್ದ ತಾಜುದ್ದೀನ್ ಅರಂತೋಡು ರವರು ಮೆಸ್ಕಾ ನವರಿಗೆ ಫೋನ್ ಮಾಡಿ ವಿಷಯ ವನ್ನು ತಿಳಿಸಿದರು. ತಕ್ಷಣವೇ ಕಾರ್ಯ ಪ್ರವರ್ತರಾದ ಮೆಸ್ಕಾ ಸಿಬ್ಬಂದಿ ಯೊಂದಿಗೆ ವಿದ್ಯುತ್ ಗುತ್ತಿಗೆದಾರ ಸೋಮಶೇಖರ ಪೈಕ ರವರು ಬಂದು ಕಂಬವನ್ನು ಬದಿಗೆ ಸರಿಸಿ ಸಂಚಾರ ಮುಕ್ತಗೊಳಿಸಿದರು. ಸುಳ್ಯ ಅಗ್ನಿಶಾಮಕ ದಳದವರು ಮರವನ್ನು ತೆರವುಗೊಳಿಸಲು ನೆರವಾದರು. ಅರಂತೋಡಿನ ಯುವಕರು ಇವರೊಂದಿಗೆ ಸಹಕರಿಸಿದರು.