ಬೆಳ್ಳಾರೆ: ಕೃಷಿಕರ ತಾಲೂಕು ಸಮಾವೇಶದ ಬಗ್ಗೆ ಪೂರ್ವ ಭಾವಿ ಸಭೆ

0

ಶ್ರೀ. ಕ್ಷೆ. ಧ. ಗ್ರಾ. ಅ. ಯೋ ವತಿಯಿಂದ ನಡೆಯಲಿರುವ ಅಡಿಕೆಗೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಪೀಡಿತ ಕೃಷಿಕರ ತಾಲೂಕು ಸಮಾವೇಶದ ಬಗ್ಗೆ ಬೆಳ್ಳಾರೆ ವಲಯ ಮಟ್ಟದ ಪೂರ್ವಭಾವಿ ಸಭೆ ಫೆ. 22ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಸಂಚಾಲಕರು ಹಾಗೂ ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಯಕ್ಷರಾದ ಏನ್. ಎ ರಾಮಚಂದ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಂಚಾಲಕರಾದ ನ್ಯಾಯವಾದಿ ಎಂ. ವೆಂಕಪ್ಪ ಗೌಡ, ಜನಜಾಗ್ರತಿ ತಾಲೂಕು ಅಧ್ಯಕ್ಷರಾದ ಲೋಕನಾಥ ಅಮೆಚ್ಚೂರು, ತಾಲೂಕು ಯೋಜನಾಧಿಕಾರಿ ನಾಗೇಶ್. ಪಿ, ಬೆಳ್ಳಾರೆ ಪ್ರಾ. ಕೃ. ಪ. ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀರಾಮ್ ಪಾಟಜೆ, ಸಂಚಾಲಕರಾದ ದೀಪಕ್ ಕುತ್ತಮೊಟ್ಟೆ, ನೂತನ ಸಮಿತಿ ಅಧ್ಯಕ್ಷ ಪ್ರಮೋದ್ ರೈ, ಪ್ರಗತಿಪರ ಕೃಷಿಕ, ನಿವೃತ್ತ ಪೊಲೀಸ್ ಅಧಿಕಾರಿ ವಿಠಲ್ ರೈ ಪೆರುವಾಜೆ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕಿಲಾಡಿ, ವಲಯ ಅಧ್ಯಕ್ಷ ವೇದ ಎಚ್. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ವಸಂತ್. ಎಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸೇವಾಪ್ರತಿನಿಧಿ ರಾಧಾಕೃಷ್ಣ ಸ್ವಾಗತಿಸಿದರು. ಸೇವಾಪ್ರತಿನಿಧಿಯವರು, ವಲಯದ ರೈತರು, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.