ಎನ್ಎಸ್ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ, ರಾಷ್ಟ್ರೀಯ ಸೇವಾ ಯೋಜನೆ, ಕೆವಿಜಿ ಪಾಲಿಟೆಕ್ನಿಕ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಅಂಗನವಾಡಿ ಕೇಂದ್ರ ಬಳ್ಳಕ್ಕ ಹಾಗೂ ಭಾರತೀಯ ವೈದ್ಯಕೀಯ ಸಂಘ ಇವರ ಸಹಯೋಗದೊಂದಿಗೆ ಗುತ್ತಿಗಾರಿನ ಹರಿಪುರ ಬಳ್ಳಕ್ಕ ಶಾಲೆಯಲ್ಲಿ ಫೆ. 25 ಮತ್ತು 26 ರಂದು ನಡೆದ ರಾಜ್ಯಮಟ್ಟದ ನಾಯಕತ್ವ ಶಿಬಿರ ಸೇವಾ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಸೇವಾ ಸಂಗಮದ ವತಿಯಿಂದ ಬಳ್ಳಕ್ಕ ಅಂಗನವಾಡಿ ಕೇಂದ್ರಕ್ಕೆ ನೀರಿನ ಕಾರಂಜಿಯನ್ನು ಕೊಡುಗೆಯಾಗಿ ನೀಡಲಾಯಿತು.
ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ನೂತನ ಕಾರಂಜಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರ್ಯಪ್ಪ ಗೌಡ ಚಿಕ್ಮುಳಿ, ದೇವರಾಜ್ ಮುತ್ಲಾಜೆ, ಬಾಲಕೃಷ್ಣ ಬೊಳ್ಳೂರು, ಚಂದ್ರಶೇಖರ ಬಿಳಿನೆಲೆ, ಡಾ. ಅನುರಾಧಾ ಕುರುಂಜಿ, ಲತಾ ಅಂಬೆಕಲ್ಲು, ಧನಂಜಯ ಮೊಗ್ರ, ಮಿತ್ರಕುಮಾರಿ ಚಿಕ್ಮುಳಿ, ವಿಜೇತ್ ಶಿರ್ಲಾಲ್, ರಕ್ಷಿತ್ ಬೊಳ್ಳೂರು, ಸುಜಿತ್ ಮೊಗ್ರ ಮೊದಲಾದವರು ಉಪಸ್ಥಿತರಿದ್ದರು.
Home Uncategorized ಬಳ್ಳಕ್ಕ ಅಂಗನವಾಡಿ ಕೇಂದ್ರಕ್ಕೆ ಕೆವಿಜಿ ಪಾಲಿಟೆಕ್ನಿಕ್ ಎನ್ಎಸ್ಎಸ್ ಸೇವಾ ಸಂಗಮದ ವತಿಯಿಂದ ಕಾರಂಜಿ ಹಸ್ತಾಂತರ