ಗುತ್ತಿಗಾರು ಶ್ರೀ ಕೃಷ್ಣ ಭಜನಾ ಮಂದಿರದ ವತಿಯಿಂದ 60ನೇ ವರ್ಷದ ಅರ್ಧ ಏಕಾಹ ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ಶ್ರೀ ಕೃಷ್ಣ ಭಜನಾ ಮಂದಿರ ಗುತ್ತಿಗಾರು ಇದರ ವತಿಯಿಂದ ಶ್ರೀ ಗಣಪತಿ ಹೋಮ, 60ನೇ ವರ್ಷದ ಅರ್ಧ ಏಕಾಹ ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.23 ರಂದು ನಡೆಯಿತು.

ಬೆಳಗ್ಗೆ ದೀಪ ಪ್ರತಿಷ್ಠೆ ಬಳಿಕ ಅರ್ಧ ಏಕಾಹ ಪ್ರಾರಂಭವಾಯಿತು.
ಬಳಿಕ‌ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ನಡೆದು ಅನ್ನ ಸಂತರ್ಪಣೆ ನಡೆಯಿತು. ಸಂಜೆ ವಿವಿಧ ಭಜನಾ ತಂಡಗಳ ಭಜನೆಯೊಂದಿಗೆ ಗುತ್ತಿಗಾರು ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಬಳಿಕ ಭಜನಾ ಮಂದಿರ ವಠಾರದಲ್ಲಿ ಭಜನಾ ತಂಡಗಳ ಸಾಮೂಹಿಕ ನೃತ್ಯ ಭಜನೆ ನಡೆಯಿತು. ಭಜನಾ ಮಂದಿರದಲ್ಲಿ ದೀಪೋದ್ವಾಸನೆ ನಡೆಯಿತು. ಶ್ರೀ ಕೃಷ್ಣ ಭಜನಾ ಮಂದಿರದ ಆಡಳಿತ ಮಂಡಳಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿತು.