ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆ

0

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಸ್ಪರ್ಧಾ ಕಾರ್ಯಕ್ರಮವು ಜರುಗಿತು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಂಘಟಕ , ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು .

ಪುತ್ತೂರಿನ ನವೀನಾಂಜಲಿ ಫೇಸ್ ಬುಕ್ ಲೈವ್ ಕಾರ್ಯಕ್ರಮ ಸಂಯೋಜಕ ಮತ್ತು ಗಾಯಕರಾದ ನವೀನ ಪುತ್ತೂರು ರವರು ಕಾರ್ಯಕ್ರಮ ಉದ್ಘಾಟಿಸಿದರು . ಖ್ಯಾತ ಗಾಯಕ ಚಂದ್ರಶೇಖರ್ ಹೆಗ್ಡೆ ಪುತ್ತೂರು ಮತ್ತು ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ ರವರು ಸ್ಪರ್ಧೆಯ ತೀರ್ಪುಗಾರರಾಗಿ ಸೇವಾ ಸಲ್ಲಿಸಿದರು . ಸಭಾ ಕಾರ್ಯಕ್ರಮದಲ್ಲಿ ಪದ್ಮರಾಜ್ ಬಿ ಸಿ ಚಾರ್ವಾಕ ರಿಗೆ 2023 ನೇ ಸಾಲಿನ ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ಚಂದ್ರಶೇಖರ್ ಹೆಗ್ಡೆ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು . ವೇದಿಕೆಯಲ್ಲಿ ವಸಂತ್ ಬಾರಡ್ಕ ಉಪಸ್ಥಿತರಿದ್ದರು .

ಇದೇ ಸಂದರ್ಭದಲ್ಲಿ ಗಾಯಕ ಮತ್ತು ಸಾಹಿತಿಯಾದ ಭೀಮರಾವ್ ವಾಷ್ಠರ್ ರವರ ಗಾಯನದ ಹೇ ನಿಂಬು ಹಣ್ಣಾಸರ್ಕ್ಲಿ ಪೋರ್ಗಿ ಎಂಬ ಮರಾಠಿ ಚಿತ್ರಗೀತೆಯನ್ನು ಬಿಡುಗಡೆ ಮಾಡಲಾಯಿತು . ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಪ್ರಾರ್ಥಿಸಿದರು. ವಿವಿಧ ಊರುಗಳಿಂದ ಆಗಮಿಸಿದ್ದ ಗಾಯಕರಾದ ಪುಷ್ಪಾವತಿ ಎಡಮಂಗಲ , ನಿತ್ಯಾ ಬೆಂಗಳೂರು , ಗಣೇಶ್ ಗಣಿ , ಸನತ್ ಬೆಳ್ಳಾರೆ , ಯಶ್ವಿಕ ಕುಂಟಿನಿ , ವಿ. ಮಹೇಶ್ ಮಂಜೇಶ್ವರ , ಅವನಿ ಎಮ್ ಎಸ್ ಸುಳ್ಯ , ಅಶ್ವಿಜ್ ಆತ್ರೇಯ ಸುಳ್ಯ , ಪೂಜಾಶ್ರೀ ಬಳ್ಳಡ್ಕ , ದಿಶಾ ಸುಳ್ಯ, ಅಶ್ಮಿತ್ ಎ ಜೆ ಮಂಗಳೂರು , ಸುರೇಶ ಕುಮಾರ್ ಜಿ ಚಾರ್ವಾಕ , ಮನ್ವಿತ್ ಬಳ್ಳಡ್ಕ , ವೈಷ್ಣವಿ ಎಂ ಆರ್ ಪುತ್ತೂರು , ಸ್ನಿಗ್ಧ ಕೃಷ್ಣ ಕುರುಮುಜ್ಜಿ , ಪ್ರವೀಣ್ ಡಿ ದೇವ , ಸುಜಿತ್ ಗುತ್ತಿಗಾರು ಸವಿತಾ ಸಂತೋಷ್ , ಚಂದನ್ ಸುಳ್ಯ , ಕೃಷ್ಣವೇಣಿ , ಧನುಷಾ ತೊಡಿಕಾನಂ , ಅನಘ ಎಂ ಅಳಿಕೆ , ಭಾಗ್ಯಶ್ರೀ ದೊಡ್ಡತೋಟ , ಪ್ರಣವಿ ಕನಕಮಜಲು , ಜಯಶ್ರೀ ಕಡಬ , ಸವಿತಾ ಬಾಳಿಲ , ಸಂದೀಪ್ ಸುಳ್ಯ , ತನ್ವಿ ಎಸ್ ಬಜ್ಪೆ , ಎಸ್ ಎ ಅಣ್ಣು ಮತ್ತು ಶೀಲಾ ಸುರೇಶ ಬಜಪೆ ರವರು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು . ಎಲ್ಲಾ ಗಾಯಕರಿಗೆ ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು . ಫೈನಲ್ ಸ್ಪರ್ಧೆಗೆ ಬಂದ 5 ಜನ ಗಾಯಕರಿಗೆ ಮಾರ್ಚ 5 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಫೈನಲ್ ಸ್ಪರ್ಧೆ ಆಯೋಜಿಸಿ ವಿನ್ನರ್ ರನ್ನರ್ ಮತ್ತು ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ .