ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಶಾಖೆ ವತಿಯಿಂದ ತಹಶೀಲ್ದಾರ್ ಅನಿತಾಲಕ್ಮಿಯವರಿಗೆ ಬೀಳ್ಕೊಡುಗೆ

0

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಶಾಖೆ ಅಧ್ಯಕ್ಷರಾಗಿರುವ ಸುಳ್ಯ ತಹಶೀಲ್ದಾರ್ ಅನಿತಾಲಕ್ಮಿಯವರು ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡು ಸುಳ್ಯದಿಂದ ತೆರಳಲಿರುವ ತಹಶೀಲ್ದಾರ್ ರವರನ್ನು ರೆಡ್ ಕ್ರಾಸ್ ವತಿಯಿಂದ ಬೀಳ್ಕೊಡುವ ಕಾರ್ಯಕ್ರಮ ಮಾ.೩ ರಂದು ವರ್ತಕರ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಮುಸ್ತಾಪ ಕೆ ಎಂ ರವರು ಅಭಿನಂದನಾ ಭಾಷಣ ಮಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ ಸುಧಾಕರ ರೈ ಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ತೀಪ್ಪೆಶ್ ಶುಭ ಹಾರೈಸಿದರು.
ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಭಟ್,ಶಿಕ್ಷಣ ಇಲಾಖೆ ಪೃಥ್ವಿ, ಶ್ರೀಮತಿ ಪ್ರಮೀಳಾ,ಶ್ರೀಮತಿ ಪದ್ಮ,ನವೀನ್ ಬೆಳ್ಳಾರೆ,ವರ್ತಕರ ಸಂಫದ ಪ್ರಧಾನ ಕಾರ್ಯದರ್ಶಿ ಡಿ ಎಸ್ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.