ಮಾ.19-20: ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವದ ನೇಮೋತ್ಸವ; ಗೊನೆ ಮುಹೂರ್ತ

0


ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.19 ಮತ್ತು 20ರಂದು ವಿಜೃಂಭಣೆಯಿಂದ ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು.
ಬೆಳಿಗ್ಗೆ ದುಗ್ಗಲಾಯ ದೈವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ ನೇಮೋತ್ಸವ ಯಶಸ್ವಿಯಾಗಿ ನಡೆಯಲೆಂದು ಪ್ರಾರ್ಥಿಸಿ ಅವರ ತೋಟದಿಂದ ಮುಹೂರ್ತದ ಗೊನೆ ಕಡಿದು ದೈವಸ್ಥಾನಕ್ಕೆ ತರಲಾಯಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರಾದ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ, ನ.ಪಂ.ಸದಸ್ಯರಾದ ಬಾಲಕೃಷ್ಣ ರೈ ದುಗ್ಗಲಡ್ಕ,ಪದಾಧಿಕಾರಿಗಳಾದ ದಿನೇಶ್ ಡಿ.ಕೆ.,ಯತೀಶ್ ರೈ ದುಗ್ಗಲಡ್ಕ, ಚಂದ್ರಶೇಖರ ಗೌಡ ಮೋಂಟಡ್ಕ, ಶಿವಪ್ರಸಾದ್ ಕುದ್ಪಾಜೆ,ಜಗದೀಶ್ ಗೌಡ ಅಮೈ,ನಾರಾಯಣ ನಾಯ್ಕ,ಗಿರಿಧರ ಗೌಡ ನೆಕ್ರಾಜೆ,ಶ್ರೀಧರ ಆಚಾರ್ಯ ಕೆದ್ಕಾನ, ನಾರಾಯಣ ಮಣಿಯಾಣಿ,ಶ್ರೀಧರ ರೈ ದುಗ್ಗಲಡ್ಕ,ಲಕ್ಷ್ಮಣ ಗೌಡ ದುಗ್ಗಲಡ್ಕ, ಸೀತಾರಾಮ ಮಣಿಯಾಣಿ, ಪ್ರಕಾಶ್ ರೈ ದುಗ್ಗಲಡ್ಕ, ಲೋಹಿತ್ ಮಾಣಿಬೆಟ್ಟು, ಗಿರೀಶ್ ರೈ ಮೂಡೆಕಲ್ಲು, ಕುಸುಮಾಧರ ಎಸ್.ಎನ್.,ಬಾಬು ಮಣಿಯಾಣಿ ದುಗ್ಗಲಡ್ಕ, ಸುಬ್ರಹ್ಮಣ್ಯ ಕುಂಬೆತ್ತಿಬನ, ನಾರಾಯಣ ಕಲಾಪ್ರಿಯ,ಲತೀಶ್ ನೀರಬಿದಿರೆ,ಶೇಷಪ್ಪ ರೈ ದುಗ್ಗಲಡ್ಕ ಜಯರಾಮ ಕಲಾಪ್ರಿಯ, ಚನಿಯ ದುಗ್ಗಲಡ್ಕ,ರಮೇಶ್ ನೀರಬಿದಿರೆ ಮೊದಲಾದವರು ಉಪಸ್ಥಿತರಿದ್ದರು.