ಕೆ.ಎಸ್.ಈಶ್ವರಪ್ಪ, ಡಿವಿಎಸ್ ಸಹಿತ ನಾಯಕರ ಆಗಮನ
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಇಂದು ಸುಳ್ಯಕ್ಕೆ ಆಗಮಿಸಲಿದೆ. ಮಧ್ಯಾಹ್ನ ೨.೩೦ರಿಂದ ಸುಳ್ಯ ನಗರದಲ್ಲಿ ಬೃಹತ್ ರೋಡ್ಶೋ ನಡೆಯಲಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಉಪಮುಖ್ಯಮಂಂತ್ರಿ ಕೆ.ಎಸ್.ಈಶ್ವರಪ್ಪ, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಸಹಿತ ಹಲವು ಗಣ್ಯರು ಈಗಾಗಲೇ ಆಗಮಿಸಿದ್ದಾರೆ. ಸಚಿವ ಎಸ್.ಅಂಗಾರರು ನಾಯಕರನ್ನು ಸ್ವಾಗತಿಸಿದರು.