ಬಳ್ಪ : ಒತ್ತೆಕೋಲ ನಡಾವಳಿ

0


ಬಳ್ಪ ಗ್ರಾಮದ ಬುಡೆಂಗಿಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿಯು ಮಾ. 11 ಮತ್ತು 12ರಂದು ನಡೆಯಿತು. ಮಾ. 10ರಂದು ಸ್ಥಳ ಶುದ್ಧಿ ಮತ್ತು ಗಣಪತಿ ಹೋಮ ನಡೆಯಿತು.
ಮಾ. 11ರಂದು ಸಂಜೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆದು ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಾಟ ನಡೆಯಿತು. ಮಾ. 12ರಂದು ಮುಂಜಾನೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಬಳಿಕ ಪ್ರಸಾದ ವಿತರಣೆ, ಮಾರಿಕಳಕ್ಕೆ ಹೋಗುವುದು ನಡೆದ ಬಳಿಕ ಮುಳ್ಳುಗುಳಿಗ ದೈವದ ನೇಮ ನಡೆಯಿತು. ಮಾ. 11ರಂದು ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗೋಪಾಲಕೃಷ್ಣ ಭಟ್ ದೇವಸ್ಯರವರ ಸಂಯೋಜನೆಯಲ್ಲಿ ಯಕ್ಷಗಾನ ಬಯಲಾಟ ನಡೆಯಿತು.