ಸುಳ್ಯ-ಕೊಡಿಯಾಲಬೈಲ್-ದುಗ್ಗಲಡ್ಕ ರಸ್ತೆ; 65ಲಕ್ಷದ ಕಾಮಗಾರಿಗೆ ಗುದ್ದಲಿಪೂಜೆ

0


ಪ್ರತಿಭಟನೆಯ ಕಾವು ಎದುರಿಸುತ್ತಿರುವ ಸುಳ್ಯ-ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಗೆ ಸುಮಾರು 65 ಲಕ್ಷ ಬಿಡುಗಡೆಗೊಂಡಿರುವುದಾಗಿ ತಿಳಿದುಬಂದಿದ್ದು, ದುಗ್ಗಲಡ್ಕದ ಬಳಿ ಕಾಂಕ್ರೀಟೀಕರಣಕ್ಕೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ಪ್ರಮುಖರಾದ ಹೇಮಂತ್ ಕುಮಾರ್ ಕಂದಡ್ಕ, ಶೀಲಾವತಿ ಮಾಧವ, ದಿನೇಶ್ ಡಿ.ಕೆ.,ಕಜೆ ಕುಶಾಲಪ್ಪ ಗೌಡ, ಚಂದ್ರಶೇಖರ ಗೌಡ ಮೋಂಟಡ್ಕ,ಧನಂಜಯ(ಮನು) ದುಗ್ಗಲಡ್ಕ, ಶಿವಪ್ರಸಾದ್ ಕುದ್ಪಾಜೆ, ರಾಮಚಂದ್ರ ಕೊಯಿಕುಳಿ, ಗಂಗಾಧರ ದುಗ್ಗಲಡ್ಕ, ಲವ ನೀರಬಿದಿರೆ, ಬಾಲಸುಬ್ರಹ್ಮಣ್ಯಂ ಕೂಟೇಲು, ಪ್ರೇಮಾ ಗೋಪಾಲ್ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.


ಒಟ್ಟು 65 ಲಕ್ಷದ ಅನುದಾನದಲ್ಲಿ ತಲಾ 25 ಲಕ್ಷದಂತೆ ಎರಡು ಕಡೆ ಕಾಮಗಾರಿ ಮತ್ತು 15 ಲಕ್ಷದಲ್ಲಿ ಕೊಡಿಯಾಲಬೈಲ್ ಪ್ರಥಮ ದರ್ಜೆ ಕಾಲೇಜು ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಯಲಿರುವುದಾಗಿ ತಿಳಿದುಬಂದಿದೆ.


ಈ ರಸ್ತೆ ಸಮಗ್ರ ಅಭಿವೃದ್ಧಿಯಾಗಬೇಕೆಂದು ನಾಳೆ ಆ ಭಾಗದ ನಾಗರಿಕರು ರಸ್ತೆಗಾಗಿ ನಿಧಿ ಸಂಗ್ರಹ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.