ಕ್ಯಾಂಪ್ಕೋದಿಂದ ಕಲ್ಲುಗುಂಡಿಯ ಶ್ರೀಮತಿ ಸೋಫಿಯಾ ಪಯಾಸ್ ರವರ ಹೃದಯ ಶಸ್ತ್ರ ಚಿಕಿತ್ಸೆಗೆ ಧನಸಹಾಯ

0

ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಫಲಾನುಭವಿಗಳಾದ ಮೈಕಲ್ ಫ್ರಾನ್ಸಿಸ್ ಪಯಾಸ್ ಅವರ ಪತ್ನಿ ಶ್ರೀಮತಿ. ಸೋಫಿಯಾ ಪಯಾಸ್ ಕಲ್ಲುಗುಂಡಿ ಇವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಗೆ ಸಂಬಂಧಿಸಿ ರೂ.200000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಮಾ.13 ರಂದು ವಿತರಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ವಲಯ ಮುಖ್ಯ ಮಾರುಕಟ್ಟೆ ಅಧಿಕಾರಿ ಜಯರಾಮ್ ಶೆಟ್ಟಿ , ಕಾವು ಶಾಖಾ ವ್ಯವಸ್ಥಾಪಕರಾದ ಸಂತೋಷ್ ಪಿ , ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಕುಂಞoಬು ಹಾಗೂ ಸುಳ್ಯ ಶಾಖೆಯ ಮುಖ್ಯ ಸಿಬ್ಬಂದಿ ಮಲ್ಲಿಕಾ, ಮತ್ತಿತರರು ಉಪಸ್ಥಿತರಿದ್ದರು.