ಆಲೆಟ್ಟಿ: ತುದಿಯಡ್ಕ, ಗುಡ್ಡೆಮನೆ ಕಡೆಗಳಲ್ಲಿ ಕಾಡಾನೆಗಳ ಉಪಟಳ- ಕೃಷಿ ಧ್ವಂಸ

0

ಆಲೆಟ್ಟಿ ಗ್ರಾಮದ ಹಲವು ಕಡೆಗಳಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಲೆ ಇದೆ.


ಕಳೆದ ರಾತ್ರಿ ತುದಿಯಡ್ಕ ಕೃಪಾಶಂಕರ , ಗುಡ್ಡೆಮನೆ ಪುರುಷೋತ್ತಮ, ಕೇಶವ ,ಜಯನಾಥ , ಚೆನ್ನಕೇಶವ ರವರ ತೋಟಗಳಿಗೆ ತಡರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಪಡಿಸಿದ್ದು ಬಹಳ ನಷ್ಟ ಅನುಭವಿಸಿರುವುದಾಗಿ ತಿಳಿದು ಬಂದಿದೆ.


ಈ ಭಾಗದಲ್ಲಿ ಕೃಷಿಕರು ಆನೆಗಳ ಉಪಟಳ ದಿಂದಾಗಿ ತಾವು ಬೆಳೆದ ಕೃಷಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.