ಕೊಡಿಯಾಲಬೈಲು: ಮನೆಗೆ ಬಂದ ನಾಗರಹಾವು ಕಾಡಿಗೆ

0

ನಂದರಾಜ್ ಸಂಕೇಶರಿಂದ ಕಾರ್ಯಾಚರಣೆ

ಸುಳ್ಯ ನಗರದ ಕೊಡಿಯಾಲಬೈಲಿನಲ್ಲಿ ಮನೆಯೊಂದಕ್ಕೆ ಬಂದ ನಾಗರಹಾವನ್ನು ನಂದರಾಜ್ ಸಂಕೇಶ ಅವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.

ಕೊಡಿಯಾಲಬೈಲು ನಿವಾಸಿ ಚಂದ್ರವತಿ ಎಂಬವರ ಮನೆಗೆ ಮಾ.13ರಂದು ರಾತ್ರಿ ದೊಡ್ಡ ಗಾತ್ರದ ನಾಗರಹಾವೊಂದು ಬಂದಿದ್ದು, ಮನೆಯವರು ನಂದರಾಜ್ ಸಂಕೇಶರಿಗೆ ತಿಳಿಸಿದ್ದು, ಅವರು ಬಂದು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ರಕ್ಷಣೆ ಮಾಡಿದರು.