ಪಂಜ:ಬಡ ಮಹಿಳೆಯ ಚಿಕಿತ್ಸೆಗೆ ನೆರವಾದ ಸಚಿವ ಎಸ್ ಅಂಗಾರ

0

ಬಡ ಮಹಿಳೆಯೊಬ್ಬರ ಚಿಕಿತ್ಸೆಗೆ ‌ಸಚಿವ ಎಸ್ ಅಂಗಾರ ರವರು
ನೆರವು ನೀಡಿ ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ.
ಕೂತ್ಕುಂಜ ಗ್ರಾಮದ ನಾಗತೀರ್ಥ ಕಾಲೋನಿಯ ನಿವಾಸಿ ಶ್ರೀಮತಿ ಮೋಹಿನಿ ಎಂಬವರು ಹೃದಯ ಸಂಬಂಧಿತ ಅನಾರೋಗ್ಯದಿಂದ ತುರ್ತು ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಅತೀ ಬಡತನದಿಂದ ಜೀವನ ಸಾಗಿಸುತ್ತಿರುವ ಇವರ ಮನೆಗೆ ಮಾ.19 ರಂದು ಶಾಸಕ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ರವರು ಭೇಟಿ
ನೀಡಿ ತುರ್ತು ಆರ್ಥಿಕ ಸಹಾಯ ನೀಡಿದ್ದಾರೆ.

ಬಳಿಕ ಅವರು ಆಸ್ಪತ್ರೆಯವರನ್ನು ಸಂಪರ್ಕಿಸಿ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದಾರೆ.ಈ ಸಂದರ್ಭ ಹರೀಶ್ ಕಂಜಿಪಿಲಿ,ಶಿವರಾಮಯ್ಯ ಕರ್ಮಾಜೆ, ಕಾರ್ಯಪ್ಪ ಚಿದ್ಗಲ್, ಜಯರಾಮ ಕಲ್ಲಾಜೆ, ರವಿ.ಬಿ ನಾಗತೀರ್ಥ ,ಪಂಜ ಗ್ರಾಮ ಪಂಚಾಯತ್ ಸದಸ್ಯೆ ಪ್ರಮೀಳಾ ಸಂಪ ,ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ನಿರ್ಮಲಾ ಪಲ್ಲೋಡಿ , ರಾಕೇಶ್ ರೈ ಕೆಡೆಂಜಿ,ಚೆನ್ನಕೇಶವ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.