ಸಂಪಾಜೆ : ನದಿಯಲ್ಲಿ ಹೂಳು ತುಂಬಿದ ಭಾಗದಲ್ಲಿ ಸರ್ವೆ ಕಾರ್ಯ ಆರಂಭ

0

ಸಂಪಾಜೆ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನದಿಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸುವುದು ಹಾಗೂ ತಡೆಗೋಡೆ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿ ರವಿಕುಮಾರ್ ರವರಿಗೆ ಮನವಿ ಸಲ್ಲಿಸಿದ ನಂತರ ನದಿ ಹೂಳು ತುಂಬಿದ ಸ್ಥಳಗಳ ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಣ ಹಾಗೂ ಫೋಟೋ ಚಿತ್ರೀಕರಣ ಕಾರ್ಯಕ್ರಮ ಸಾರ್ವಜನಿಕರ ಸಮ್ಮುಖದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸೊಸೈಟಿ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ತೆಕ್ಕಿಲ್ ಪ್ರತಿಷ್ಠಾನದ ಟಿ. ಎಂ. ಶಾಹಿದ್ ತೆಕ್ಕಿಲ್ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಅಬೂಸಾಲಿ ಗೂನಡ್ಕ, ಹನೀಫ್ ಎಸ್. ಕೆ. ಸಂಪಾಜೆ, ರಜನಿ ಶರತ್, ಪ್ರಮುಖರಾದ ಪದ್ಮಯ್ಯ ಗೌಡ, ರವಿಶಂಕರ್ ಭಟ್ ಸುಳ್ಯಕೊಡಿ, ಕೊಂದಲಕಾಡ್ ನಾರಾಯಣ ಭಟ್, ಸತ್ಯನಾರಾಯಣ ಭಟ್ ದರ್ಕಾಸ್, ರವಿ ಭಟ್ ವುಡ್ ಇಂಡಸ್ಟ್ರಿಸ್, ಮಾಜಿ ಪಂಚಾಯತ್ ಅಧ್ಯಕ್ಷರಾದ ಕೆ. ಪಿ ಜಗದೀಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಕಿಶೋರ್ ಕುಮಾರ್, ಪ್ರಶಾಂತ್ ವಿ. ವಿ, ನವೀನ್ಚಂದ್ರ ಕಂಪನಿತೋಟ, ವಾಸುದೇವ ಕಟ್ಟಮನೆ, ಕೇಶವ ಬಂಗ್ಲೆ ಗುಡ್ಡೆ, ನಾಗೇಶ್ ಬಾಚಿಗದ್ದೆ, ಕಿಶೋರ್ ಬಿ. ಎಸ್. ಸುಧಾ ಬಾಚಿಗದ್ದೆ, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಸಂಟ್ಯಾರ್, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷರಾದ ತಾಜ್ ಮಹಮ್ಮದ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ ರಝಕ್ ಸೂಪರ್, ರಫೀಕ್ ಕರಾವಳಿ, ಜಾಕೊಬ್ ಡಿಸೋಜಾ, ಸಿರಿಲ್ ಕ್ರಸ್ತಾ, ಲಿಗೋರಿ ಡಿಸೋಜಾ, ಶಮೀರ್ ತಾಜ್, ಕಿಶೋರ್ ಸ್ಪಾಟ್ ಕಂಪ್ಯೂಟರ್ ,ಸೊಸೈಟಿ ಮಾಜಿ ಅಧ್ಯಕ್ಷರಾದ ಡಿ. ಆರ್. ನಾರಾಯಣ ಭಟ್ , ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ ,ಕಿಪಾಯತುಲ್ಲ ಸಂಟ್ಯಾರ್, ಸಮೀರ್ ಕರಾವಳಿ, ನವೀನ್ ರೈ ಕಲ್ಲುಗುಂಡಿ,ಈಶ್ವರ ಆಚಾರ್ಯ,ಮಂಜುನಾಥ್ ಟಯರ್, ದಿನಕರ ಸಣ್ಣಮನೆ, ಚಂದ್ರ ಶೇಖರ್ ರೈ,ಅಂಟೋನಿ ಡಿಸೋಜಾ, ಶರತ್ ಕಿಲಾರ್, ರಾಮಚಂದ್ರ ಭಟ್ ಲೈನ್ ಕಜೆ ಸಿರಾಜ್ ಕರಾವಳಿ, ಗುರುವಪ್ಪ , ಉಮೇಶ್ ಕಣಪಿಲ, ಜೂಲಿಯನ ಡಿಸೋಜಾ, ಕುಂಞ ಕಣ್ಣ ಮಣಿಯಾಣಿ ಮೊದಲದವರು ಉಪಸ್ಥಿತರಿದ್ದರು.