ಅರಂತೋಡು – ಅಡ್ತಲೆ ರಸ್ತೆ : ಸಚಿವ ಅಂಗಾರರು‌ ನುಡಿದಂತೆ ನಡೆದಿದ್ದಾರೆ : ಕೇಶವ ಅಡ್ತಲೆ

0

ರೂ.2 ಕೋಟಿ ಕಾಮಗಾರಿ ಆರಂಭವಾಗಿದೆ – ಇನ್ನೂ 1 ಕೋಟಿ‌ ಹೆಚ್ಚುವರಿ ಇರಿಸಿದ್ದಾರೆ

ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ರೂ.2 ಕೋಟಿ ಅನುದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಇನ್ನೂ ಹೆಚ್ಚುವರಿ ರೂ.1 ಕೋಟಿ ಅನುದಾನ ಇದೆ. ನಮ್ಮ‌ಕ್ಷೇತ್ರದ ಶಾಸಕರು, ಸಚಿವರೂ ಆಗಿರುವ ಎಸ್.ಅಂಗಾರರು‌ ನುಡಿದಂತೆ ನಡೆದಿದ್ದಾರೆ ಎಂದು ಅರಂತೋಡು ‌ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ಸುದ್ದಿಗೆ ತಿಳಿಸಿದ್ದಾರೆ.

ಸಚಿವ ಅಂಗಾರ ರವರು ಮತ್ತು ಬಿ. ಜೆ. ಪಿ. ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಯವರು ಆರಂತೋಡು -ಎಲಿಮಲೆ ರಸ್ತೆಯ ಗುದ್ದಲಿ ಪೂಜೆ ದಿನ ಹೇಳಿಕೆ ನೀಡಿದಂತೆ 1ಕೋಟಿ ಯ ರಸ್ತೆ ಅಗಲಿಕಣ ಕಾಮಗಾರಿ ಮುಗಿದಿದ್ದು, ಉಳಿದ ರೂ. 2 ಕೋಟಿ ಅನುದಾನ ಕಾಮಗಾರಿ ಕೆಲಸ ಇಂದಿನಿಂದ ಆರಂಭ ಗೊಂಡಿದೆ. ಮತ್ತು ಈಗ ಕೆಲಸ ಆರಂಭಗೊಂಡಿರುವ 2 ಕೋಟಿ ಅನುದಾನ ವಲ್ಲದೆ ಹೆಚ್ಚುವರಿ ಯಾಗಿ ರೂ.1ಕೋಟಿ ಹೆಚ್ಚಿನ ಅನುದಾನವನ್ನು ಒದಗಿಸಿದ್ದಾರೆ. ಅನುದಾನ ನೀಡುವ ಜೊತೆಗೆ ತಮ್ಮ ಮಾತನ್ನು ಉಳಿಸಿಕೊಂಡ ಸಚಿವರಿಗೆ, ಮಂಡಲ ಸಮಿತಿ ಅಧ್ಯಕ್ಷರಗೆ ರಸ್ತೆ ಪಲಾನುಭವಿಗಳ ಪರವಾಗಿ ನಾವು ಕೃತಜ್ಞರಾಗಿದ್ದೆವೆ ಎಂದು ಕೇಶವ ಅಡ್ತಲೆ ತಿಳಿಸಿದ್ದಾರೆ.