ಬೆಳ್ಳಾರೆಯ ಪಂಜಿಗಾರಿನಲ್ಲಿ ಮೀನಾ ಪೆಟ್ರೋ ಫ್ಯೂಯೆಲ್ಸ್ ಶುಭಾರಂಭ

0

ಉದ್ಯಮಿ, ಬೆಳ್ಳಾರೆ ಮೀನಾ ಎಂಟರ್ಪ್ರೈಸಸ್ ನ ಮಾಲಕರಾದ ವಿ. ಗಣೇಶ್ ಭಟ್ ಮಾಲಕತ್ವದ ನಯಾರ ಎನರ್ಜಿ ಸಂಸ್ಥೆಯ ಮೀನಾ ಪೆಟ್ರೋ ಫ್ಯೂಯೆಲ್ಸ್ ಏ. 2ರಂದು ಶುಭಾರಂಭಗೊಂಡಿತು. ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಕಛೇರಿಯನ್ನು ಉದ್ಘಾಟಿಸಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್. ಪ್ರಸಾದ್ ದೇವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ಮತ್ತು ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ರೈ ಅಜಿರಂಗಳ ಪಂಪನ್ನು ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಹರೆಕಳ ಹಾಜಬ್ಬರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅವರ ವಿದ್ಯಾಸಂಸ್ಥೆಗೆ ರೂ. 10,000/- ಧನಸಹಾಯವನ್ನು ನೀಡಿದರು. ಸಂಸ್ಥೆಯ ಮಾಲಕರಾದ ವಿ ಗಣೇಶ್ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ವೇದಿಕೆಯಲ್ಲಿ ಶ್ರೀಮತಿ ಸುಧಾ ಜಿ ಭಟ್ ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಭಟ್ ವಿಯವರ ಪುತ್ರ ಪವನ್ ವಿ ವಂದಿಸಿದರು. ಗಣೇಶ್ ಭಟ್ ರ ತಾಯಿ ಶ್ರೀಮತಿ ಮೀನಾಕ್ಷಿ ಅಮ್ಮ, ಸೊಸೆ ಶ್ರೀಮತಿ ಅಂಜಲಿ, ಪುತ್ರಿ ಶ್ರೀಮತಿ ಪ್ರಾಂಜಲಿ, ಅಳಿಯ ಪ್ರಣೀತ್ ಎಂ.ಬಿ, ಸಹೋದರರಾದ ವೆಂಕಟರಾಮ್ ಭಟ್, ರವಿ ಭಟ್ ಮುಂಬಯಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.