ಜಾಲ್ಸೂರು: ದಾಲ್ಸೂರಾಯಿ ದೈವದ ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ

0

ಜಾಲ್ಸೂರು ಗ್ರಾಮದ ಗ್ರಾಮ ದೈವ ಅರಿಯಡ್ಕ ಶ್ರೀ ದಾಲ್ಸೂರಾಯಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವವು ಎ.12ರಂದು ನಡೆಯಿತು.


ಎ.12ರಂದು ಬೆಳಿಗ್ಗೆ ಶ್ರೀ ವನಶಾ ಸ್ತಾವು ದೇವರ ಪೂಜೆ, ಗುಳಿಗ ತಂಬಿಲ, ನಾಗತಂಬಿಲ ಹಾಗೂ ಶ್ರೀ ದಾಲ್ಸೂರಾಯಿ ದೈವದ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಅನ್ನಸಂತರ್ಪಣೆಯ ಬಳಿಕ ಭಂಡಾರ ತೆಗೆದು ಶ್ರೀ ದಾಲ್ಸೂರಾಯಿ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯಿತು. ಬಳಿಕ ಗುಳಿಗ ದೈವದ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೈವಗಳ ಪ್ರಸಾದ ಸ್ವೀಕರಿಸಿದರು.


ದೈವಸ್ಥಾನದ ಆಡಳಿತ ಮೊಕ್ತೇಸರ ಬಿ.ರವೀಂದ್ರ ಗೌಡ ಅರಿಯಡ್ಕ ಮತ್ತು ಮನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅರ್ಚಕ ಮನೋಜ್ ಕಲ್ಲೂರಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು.


ಅನ್ನದಾನದ ಸೇವಾದಾರರಾಗಿ ಗುಜರಾತಿನ ಉಮರ್ ಗಾಂವ್ ಗಾರ್ಮೆಂಟ್ ಮೆನ್ಯೂಫ್ಯಾಕ್ಚರರ್‍ಸ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ| ಆರ್.ಕೆ.ನಾಯರ್ ಎರ್ಮೆಕ್ಕಾರ್ (ಗುಜರಾತ್)ರವರು, ಶಾಮಿಯಾನದ ಸೇವಾದಾರರಾಗಿ ಶ್ರೀ ಆದಿಶಕ್ತಿ ಪಾರ್ಸೆಲ್ ಸರ್ವಿಸ್‌ನ ಮಾಲಕ ಎಂ.ಎಸ್.ರಮೇಶ್ ಹಾಗೂ ವಿದ್ಯುತ್ ದೀಪಾಲಂಕಾರದ ಸೇವಾದಾರರಾಗಿ ಕುಂಬ್ರ ನೀರಾಲು ಮನೆ (ಆದಿ ಅರಿಯಡ್ಕ) ಪದ್ಮಾವತಿ ಎಸ್.ರೈ ಮತ್ತು ಮಕ್ಕಳು ಸಹಕರಿಸಿದರು.