ಕೆಲಸಕ್ಕೆ ಹೋಗಿದ್ದ ಸ್ಥಳದಲ್ಲಿ ಹಲ್ಲೆ ಆರೋಪ:ಸುಬ್ರಹ್ಮಣ್ಯದ ವ್ಯಕ್ತಿ ಆಸ್ಪತ್ರೆಗೆ ದಾಖಲು

0

ಕೆಲಸಕ್ಕೆ ಹೋಗಿದ್ದ ಸುಬ್ರಹ್ಮಣ್ಯದ ವ್ಯಕ್ತಿಯೊಬ್ಬರಿಗೆ ಕರಿಕ್ಕಳದಲ್ಲಿ ಕೆಲಸಕ್ಕೆ ಹೋದ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವುದಾಗಿ ಆರೋಪಿಸಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಸುಬ್ರಹ್ಮಣ್ಯ ಸಮೀಪದ ಕಲ್ಲಾಜೆ ನೇರಳಗದ್ದೆಯ ಉಕ್ರಪ್ಪ ಆಸ್ಪತ್ರೆಗೆ ದಾಖಲಾದವರು.
ಪಂಜ ಸಮೀಪದ ಕರಿಕ್ಕಳದ ಪಂಬೆತ್ತಾಡಿಗೆ ಎ.12 ರಂದು ಕೆಲಸಕ್ಕೆ ಹೋದ ವೇಳೆ ಅಡಿಕೆ ಚೀಲ ಎತ್ತುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಗೊಳಾದ ವ್ಯಕ್ತಿಯ ಕೈ ಗೆ ಬಲವಾದ ಹೊಡೆತ ಬಿದ್ದಿದೆ ಎನ್ನಲಾಗಿದ್ದು ಸುಬ್ರಹ್ಮಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯವರ ಒತ್ತಾಯದ ಮೇರೆಗೆ ಎ.13ರಂದು ಕಡಬ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿ ದುಬಂದಿದೆ.

ಆಸ್ಪತ್ರೆಗೂ ಬಂದು ವೀಡಿಯೋ ಚಿತ್ರೀಕರಿಸಿಕೊಂದು ಹೋದ ತಂಡ: ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದು ಹಲ್ಲೆ ಮಾಡಿದ್ದಾರೆ ಎನ್ನಲಾದ ವ್ಯಕ್ತಿ ಆಸ್ಪತ್ರೆಗೆ ಬಂದು ವಾಗ್ವಾದ ನಡೆಸಿದಲ್ಲದೆ ಅವರ ಬಳಗದಲ್ಲಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆಯ ಕೊಠಡಿಗೆ ಅನುಮತಿ ರಹಿತವಾಗಿ ನುಗ್ಗಿ ಹಲ್ಲೆಗೊಳಗಾದ ವ್ಯಕ್ತಿಯ ಮಗಳ ಸಹಿತ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಹೋಗಿರುವುದಾಗಿ ಹಲ್ಲೆಗೊಳಗಾದ ವ್ಯಕ್ತಿಯ ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಬೆಳ್ಳಾರೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಗೆ ಬರುವುದಾಗಿ ತಿಳಿದು ಬಂದಿದೆ. ಪೊಲೀಸರ ಪರಿಶೀಲನೆಯ ಬಳಿಕ ಸತ್ಯಾಂಶ ಹೊರ ಬರಲಿದೆ.