ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣ

0

ಮೂರನೇ ಆರೋಪಿಗೆ ಷರತ್ತು ಬದ್ಧ ಜಾಮೀನು

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣದ ಮೂರನೇ ಆರೋಪಿಗೆ ಮಂಗಳೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ‌ಜಾಮೀನು ನೀಡಿದೆ.

2020 ರ ಅಕ್ಟೋಬರ್ 8 ರಂದು ಕಲ್ಲುಗುಂಡಿಯ ಸಂಪತ್ ಎಂಬವರು ಸುಳ್ಯ ಶಾಂತಿನಗರದ ಅವರ ಬಾಡಿಗೆ ಮನೆಯಿಂದ ಕಾರಿನಲ್ಲಿ‌ ಬರುತ್ತಿದ್ದಾಗ ಅವರನ್ನು ಅಡ್ಡ ಗಟ್ಟಿ, ಅಟ್ಟಾಡಿಸಿಕೊಂಡು‌ ಹೋಗಿ ಮನೆಯೊಂದರೊಳಗೆ ಕಡಿದು‌ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೋಲೀಸರು ಬಂಧಿಸಿದ್ದರು. ಪ್ರಕರಣದ ಮೂರನೇ ಆರೋಪಿಯಾಗಿರುವ ಮನೋಜ್ ಪಿ.ಎ. ಅಲಿಯಾಸ್ ಮಧು ಎಂಬವರು ಮಂಗಳೂರಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, 2023 ರ ಎಪ್ರಿಲ್ 19 ರಂದು ಷರತ್ತು ಬದ್ಧ ‌ಜಾಮೀನು ಮಂಜೂರು ಮಾಡಿದೆ.

ಆರೋಪಿಯ ಪರವಾಗಿ ವಕೀಲರಾದ ಯಸ್.ಕೆ.ವಿನಯ್ ಸೋಣಂಗೇರಿ ಮತ್ತು ರಾಕೇಶ್ ಮಸ್ಕರೇನಸ್ ರವರು ವಾದಿಸಿರುತ್ತಾರೆ.

ಸಂಪತ್ ಕೊಲೆ ಪ್ರಕರಣದ ಒಟ್ಟು 8 ಮಂದಿ ಆರೋಪಿಗಳಲ್ಲಿ ರವೀಂದ್ರ, ರಾಜೇಶ್, ಡಿಂಪಲ್, ಶಿಶಿರ್, ಕಾರ್ತಿಕ್ ರಿಗೆ ಈ ಹಿಂದೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಪ್ರಕರಣದ ಒಂದನೇ ಆರೋಪಿ ಮನೋಹರ್ ಹಾಗೂ ಎರಡನೇ ಆರೋಪಿ ಬಿಪಿನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.