ನಡುತೋಟ : ಧರ್ಮದೈವ ನಡಾವಳಿ ಸಂಪನ್ನ

0

ಬಿಳಿನೆಲೆ ಕೈಕಂಬದ ನಡುತೋಟ ತರವಾಡು ಮನೆಯ ವಠಾರದಲ್ಲಿ ಎ. 23 ಹಾಗೂ 24ರಂದು ನಡೆದ ಧರ್ಮ ದೈವ ಹಾಗೂ ಪರಿವಾರ ದೈವಗಳ ನಡಾವಳಿಯು ಸಂಪನ್ನಗೊಂಡಿತು.

ಏ.23ರಂದು ನಡು ತೋಟ ಧರ್ಮದೈವಗಳ ಚಾವಡಿ ಯಿಂದ ಹಾಗೂ ಶಿರಾಡಿ ದೈವದ ಚಾವಡಿ ದೈವಗಳ ಬಂಡಾರವನ್ನು ತರವಾಡು ಮನೆಯ ಕೊಡಿನಾಡುವಿಗೆ ತರಲಾಯಿತು. ತದನಂತರ ಪರಿವಾರ ದೈವಗಳಿಗೆ ಎಣ್ಣೆ ನೀಡಿ ಪರಿವಾರ ದೈವಗಳ ನಿತ್ಯೋತ್ಸವಗಳು ನಡೆದವು. 24ರಂದು ಬೆಳಿಗ್ಗೆ ಧರ್ಮ ದೈವ ರುದ್ರಾಂಡಿ ಹಾಗೂ ಶಿರಾಡಿ ದೈವಗಳ ನೇಮಹೋತ್ಸವ ನಡೆದು ಊರ ಪರ ಊರ ಭಕ್ತಾ ಅಭಿಮಾನಿಗಳಿಗೆ ಪ್ರಸಾದ ವಿತರಣೆ ನಡೆಯಿತು. ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಕುಟುಂಬದ ಹಿರಿಯರಾದ ನಾಗಣ್ಣಗೌಡ ನಡು ತೋಟ ಹಾಗೂ ಆಡಳಿತ ಮಂಡಳಿಯವರು, ಕುಟುಂಬದ ವರು ಉಪಸ್ಥಿತರಿದ್ದರು.