ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಯವರಿಂದ ಪ್ರಾರ್ಥನೆ ಮತ್ತು ‌ಕಾಲನಿಗೆ ಭೇಟಿ ನೀಡಿ ಮತ ಯಾಚನೆ

0

ಆಲೆಟ್ಟಿ ಗ್ರಾಮದ ಶ್ರೀ ಸದಾಶಿವ ದೇವಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ರವರು ಇಂದು ಬೆಳಗ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ ಸದಾಶಿವ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿದ ಬಳಿಕ ಕುಡೆಕಲ್ಲು ಮಹಮ್ಮಾಯಿ ದೇವಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿದರು.


ನಂತರ ಕುಡೆಕಲ್ಲು
ಪ.ಜಾತಿ ಕಾಲನಿಗೆ ಮತ್ತು ನಾಗಪಟ್ಟಣ ಸಿ.ಆರ್.ಸಿ ಕಾಲನಿಗೆ ಭೇಟಿ ನೀಡಿ ಮತ ಯಾಚಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸ್ಥಳೀಯ ಪ್ರಮುಖರಾದ ಕೃಪಾಶಂಕರ ತುದಿಯಡ್ಕ, ಎನ್.ಎ.ರಾಮಚಂದ್ರ, ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಶ್ರೀಪತಿ ಭಟ್ ಮಜಿಗುಂಡಿ, ಸುನಿಲ್ ಕೇರ್ಪಳ, ವಿನಯ್ ಮುಳುಗಾಡು, ಶ್ಯಾಮ್ ಪಾನತ್ತಿಲ, ಮಹೇಶ್ ಮೇನಾಲ, ಶ್ರೀಮತಿ ಶಾರದಾ,ತೀರ್ಥಕುಮಾರ್ ಕುಂಚಡ್ಕ, ಜಗದೀಶ್ ಸರಳಿಕುಂಜ,ಧನಂಜಯ ಕುಂಚಡ್ಕ, ಸತೀಶ್ ಕುಂಭಕ್ಕೋಡು, ಶಿವಾನಂದ ರಂಗತ್ತಮಲೆ, ಲತೀಶ್ ಗುಂಡ್ಯ, ಮಹೇಶ್ ಕುತ್ಯಾಳ, ನವೀನ್ ಕುಮಾರ್ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಪ್ರವೀಣ್ ಕಲ್ಲೆಂಬಿ,
ತಂಗವೇಲು ನಾಗಪಟ್ಟಣ,
ಸುಧಾಕರ ಆಲೆಟ್ಟಿ,
ಅಚ್ಚುತ ಮಣಿಯಾಣಿ ಆಲೆಟ್ಟಿ, ಯತಿರಾಜ್ ಭೂತಕಲ್ಲು, ಪ್ರದೀಪ್ ಆಲೆಟ್ಟಿ, ಗಗನ್ ಬೈಪಡಿತ್ತಾಯ,ಅವಿನ್ ಆಲೆಟ್ಟಿ,ಮಲ್ಲೇಶ್ ಕುಡೆಕಲ್ಲು, ಯಶವಂತ ಆಲೆಟ್ಟಿ,
ಭೋಜರಾಯ ಆಚಾರ್ಯ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.