ಕೊಲ್ಲಮೊಗ್ರ: ದೋಲನ ಕುಟುಂಬದ ದೈವಸ್ಥಾನದಲ್ಲಿ- ವಾರ್ಷಿಕ ತಂಬಿಲ ಸೇವೆ

0

ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ಕುಟುಂಬದ ದೈವಸ್ಥಾನದಲ್ಲಿ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ದಿನದ ಪ್ರಯುಕ್ತ 8ನೇ ವರುಷದ ತಂಬಿಲ ಸೇವೆ ಮೇ.5 ರಂದು ಜರುಗಿತು.


ಆ ಪ್ರಯುಕ್ತ ಶ್ರೀ ಗಣಪತಿ ಹೋಮ, ಶ್ರೀ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ, ಶ್ರೀ ವೆಂಕಟರಮಣ ದೇವರ ಹರಿಸೇವೆ, ಶ್ರೀ ಕೆಂಚಿರಾಯನ ಪೂಜೆ ಜರುಗಿತು. ಅರ್ಚಕ ಪಿ ಮುರಳೀಕೃಷ್ಣ ಭಟ್ ವಳಲಂಬೆ ಯವರು ಶ್ರೀ ಗಣಪತಿ ಹೋಮ, ವಾರ್ಷಿಕ ತಂಬಿಲ ಸೇವೆ ನೆರವೇರಿಸಿದರು.ಶ್ರೀ ವೆಂಕಟರಮಣ ದೇವರ ಹರಿಸೇವೆ, ಶ್ರೀ ಕೆಂಚಿರಾಯನ ಪೂಜೆಯನ್ನು ಗೋಪಾಲ ದಾಸ್ ಮತ್ತು ತಿಮ್ಮಪ್ಪ ಗೌಡ ಪುತ್ಯ ನೆರವೇರಿಸಿದರು.


ಕುಟುಂಬದ ಯಜಮಾನ ಲೋಕಯ್ಯ ಗೌಡ (ಆನಂದ)ದೋಲನ ಮನೆ, ಕುಟುಂಬಸ್ಥರು, ನೆಂಟರಿಷ್ಟರು,ಬಂಧು ಮಿತ್ರರು ಉಪಸ್ಥಿತರಿದ್ದು ಗಂಧ ,ಪ್ರಸಾದವನ್ನು ಸ್ವೀಕರಿಸಿದರು .