ಮಿತ್ತಡ್ಕ‌ ಶಾಲಾ ಎಸ್ ಡಿಎಂಸಿ ವಿವಾದ

0

ಇಂದು ಮಧ್ಯಾಹ್ನವೇ ತುರ್ತು ಸಭೆ

ಮರ್ಕಂಜದ ಮಿತ್ತಡ್ಕ ಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಎಸ್ ಡಿಎಂಸಿಯೊಳಗಿನ‌ ವಿವಾದ ಬಗೆಹರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಯವರು ಸಭೆ ಕರೆಯಲು ಸೂಚಿಸಿದ್ದು, ಇಂದು ಮಧ್ಯಾಹ್ನವೇ ತುರ್ತು ಸಭೆ ನಡೆಯಲಿದೆ.

ಈ ತುರ್ತು ಸಭೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಸಿಆರ್ ಪಿಯವರು, ಎಸ್ ಡಿಎಂಸಿ, ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಮರ್ಕಂಜ, ಸ್ಥಾಯಿ ಸಮಿತಿಯವರು ಉಪಸ್ಥಿತರಿರಲಿದ್ದು, ವಿವಾದ ಯಾವ ರೀತಿ ಬಗೆಹರಿಯಲಿದೆ ಎಂದು ಕಾದು ನೋಡಬೇಕಾಗಿದೆ.