ಸೀನಿಯರ್ ಸಿವಿಲ್ ಜಡ್ಜ್ ಜೆಎಎಂಎಫ್‌ಸಿ ಮೋಹನ್ ಬಾಬು ಇಂದು ಕರ್ತವ್ಯಕ್ಕೆ ಹಾಜರು

0

ಸುಳ್ಯ ಹಿರಿಯ ನ್ಯಾಯಾಲಯ ಜೆ ಎಂ ಎಫ್ ಸಿ ನೂತನ ಸಿವಿಲ್ ನ್ಯಾಯಾಧೀಶರಾಗಿ ಮೋಹನ್ ಬಾಬು ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಬೆಂಗಳೂರು ನಗರ ೩೭ನೇ ಹೆಚ್ಚುವರಿ ಮುಖ್ಯ ಮೆಟ್ರೋ ಪೊಲಿಟೆನ್ ಮ್ಯಾಜಿಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಸುಳ್ಯ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ನ್ಯಾಯಾಧೀಶ ಸೋಮಶೇಖರ್ ರವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಬಳಿಕ ಕಳೆದ ೮ ತಿಂಗಳುಗಳಿಂದ ಸುಳ್ಯ ಹಿರಿಯ ನ್ಯಾಯಾಲಯದ ಕಲಾಪಗಳು ಪುತ್ತೂರು ನ್ಯಾಯಾಲಯದಲ್ಲಿ ನಡೆಯುತ್ತಿದ್ದವು.


ಅಲ್ಲದೆ ಕಳೆದ ಎರಡು ತಿಂಗಳುಗಳಿಂದ ಸುಳ್ಯ ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಕು. ಅರ್ಪಿತಾರವರು ತರಬೇತಿ ಹಿನ್ನೆಲೆಯಲ್ಲಿ ತೆರಳಿದ್ದರಿಂದ ಇವರ ಸ್ಥಾನಕ್ಕೆ ಪುತ್ತೂರು ನ್ಯಾಯಾಲಯದಿಂದ ಸಿವಿಲ್ ನ್ಯಾಯಾಧೀಶ ಜೆಎಂಎಫ್ ಸಿ ಶಿವಣ್ಣರವರು ವಾರದ ಮೂರು ದಿನಗಳು ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದರು.
ಈ ಎಲ್ಲಾ ಕಾರಣದಿಂದ ಸುಳ್ಯ ನ್ಯಾಯಾಲಯದ ವಕೀಲರಗಳು,ಕಕ್ಷಿದಾರರು ಕಳೆದ ಕೆಲವು ತಿಂಗಳುಗಳಿಂದ ಕೆಲವು ಕಲಾಪಗಳಿಗೆ ಪುತ್ತೂರು ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.


ಇದೀಗ ನ್ಯಾಯಾಧೀಶೆ ಕು. ಅರ್ಪಿತಾ ರವರು ತಮ್ಮ ತರಬೇತಿಯನ್ನು ಮುಗಿಸಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದು,ಸುಳ್ಯ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ನ್ಯಾಯಾಲಯಗಳಲ್ಲಿ ಕಾರ್ಯಕಲಾಪಗಳು ಇಂದಿನಿಂದ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ತಿಳಿದುಬಂದಿದೆ.