ಕೊಲ್ಲಮೊಗ್ರು: ಮನೆಗೆ ಕರೆದು ಹಲ್ಲೆ ಆರೋಪ, ನಾಲ್ವರ ಮೇಲೆ ದೂರು ಕೇಸು ದಾಖಲು

0

ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ವ್ಯಕ್ತಿಯೋರ್ವರನ್ನು ತನ್ನ ಮನೆಗೆ ಕರೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಬಂದಿದ್ದು ಗಾಯಗೊಂಡ ವ್ಯಕ್ತಿ ಸುಳ್ಯ ಕೆ.ವಿ.ಜಿ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಘಟನೆಗೆ ಸಂಬಂಧಿಸಿ ನಾಲ್ವರ ಮೇಲೆ ದೂರು ದಾಖಲಾಗಿದೆ.

ಕುಮಾರ್ ಹಾಗೂ ಮಣಿಕಂಠ ಕಟ್ಟ ಎಂಬವರಿಗೆ ಇತ್ತೀಚಿನ ಕೆಲ ದಿನಗಳಿಂದ ವೈಮನಸ್ಸು ಇತ್ತೆನ್ನಲಾಗಿದೆ. ಮೇ.25 ರಂದು ಮಣಿಕಂಠ ಕಟ್ಟ ಅವರು ಕುಮಾರ್ ಅವರನ್ನು ಮನೆಗೆ ಕರೆದಿದ್ದು ಅವರ ಮನೆಯಲ್ಲಿ ಕುಮಾರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿ ಕುಮಾರ್ ಪೊಲೀಸ್ ದೂರು ನೀಡಿದ್ದು, . ಈ ಸಂದರ್ಭ ದುರ್ಗಾದಾಸ್ ಬಂಬಿಲ, ಸುಂದರ ಗುಡ್ಡನ ಮನೆ, ಸತೀಶ್ ಟಿ.ಎನ್ ಎಂಬವರು ಅವರೊಂದಿಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯ ಪೊಲೀಸರು ಆಸ್ಪತ್ರೆಗೆ ತೆರಳಿ ಹಲ್ಲೆಗೊಳಗಾದ ಕುಮಾರ್ ಅವರ ಹೇಳಿಕೆ ಪಡೆದಿದ್ದು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.