ನಡುಗಲ್ಲು : ಅಂಜೇರಿ ಬಳಿ ಬೈಕ್ ಅಪಘಾತ , ವ್ಯಕ್ತಿಗೆ ಗಂಭೀರ ಗಾಯ

0

ನಡುಗಲ್ಲಿನ ಅಂಜೇರಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೇ. 27ರಂದು ವರದಿಯಾಗಿದೆ.

ನಾಲ್ಕೂರು ಗ್ರಾಮದ ವಾಸುದೇವ ಗೌಡ ಚಾರ್ಮತ ಎಂಬವರು ಗುತ್ತಿಗಾರಿಗೆ ಬಂದು ನಡುಗಲ್ಲಿಗೆ ತೆರಳುತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಳ್ಯದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಚಿಕಿತ್ಸೆ ಪಡೆಯುತಿದ್ದಾರೆ.ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಉಸಿರಾಟ ಸರಿಯಾಗಿ ಆಗುತಿದೆ ಎನ್ನಲಾಗಿದ್ದು ಪ್ರಜ್ಞೆ ಬಂದ ಮೇಲೆಯಷ್ಟೇ ತಲೆಯ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ತಿಳಿದು ಬಂದಿದೆ.