ಅಜ್ಜಾವರದಲ್ಲಿ ಪಾದಚಾರಿಗೆ ತಾಗಿ ಬೈಕ್ ಪಲ್ಟಿ

0

ದಂಪತಿಗಳಿಗೆ ಗಂಭೀರ ಗಾಯ : ಮಂಗಳೂರು ಆಸ್ಪತ್ರೆಗೆ ದಾಖಲು

ಅಜ್ಜಾವರ ಗ್ರಾಮದ ಇರಂತಮಜಲು ಎಂಬಲ್ಲಿ ಬೈಕೊಂದು ಪಾದಚಾರಿಗೆ ತಾಗಿ ಬೈಕ್ ಪಲ್ಟಿಯಾಗಿ ಮೂವರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.


ಮಂಡೆಕೋಲಿನ ಭವಾನಿಶಂಕರ್ ರವರು ಬೈಕ್‌ನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಸುಳ್ಯಕ್ಕೆ ಬರುತ್ತಿರುವಾಗ, ಅಜ್ಜಾವರ ಗ್ರಾಮದ ಇರಂತಮಜಲು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ತಾಗಿತು. ಪರಿಣಾಮ ಭವಾನಿಶಂಕರರ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಯಿತು.

ಬೈಕ್ ನಲ್ಲಿದ್ದ ಭವಾನಿಶಂಕರ್, ಅವರ ಪತ್ನಿ ಹಾಗೂ ಮಗು ಗಾಯಗೊಂಡಿದ್ದು ಸ್ಥಳೀಯರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರು. ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.