ಕೂತ್ಕುಂಜ ಗ್ರಾಮದ ಕಲ್ಕ ದಿ.ಅರುಣ ರವರ ಪುತ್ರ ದೇವಿಪ್ರಸಾದ್ ರವರು ಡಿ.11 ರಂದು ಸುಬ್ರಹ್ಮಣ್ಯದಲ್ಲಿ ನಿಧನರಾದರು.









ಅವರಿಗೆ 37 ವರುಷ ವಯಸ್ಸಾಗಿತ್ತು. ಸುಬ್ರಹ್ಮಣ್ಯದಲ್ಲಿ ಅವರು ರಕ್ತ ವಾಂತಿ ಮಾಡಿ ಮೃತ ಪಟ್ಟಿರುವುದಾಗಿ ಅಲ್ಲಿಯವರು ಮನೆಯವರಿಗೆ ವಿಷಯ ತಿಳಿಸಿದ್ದರು.ಬಳಿಕ ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತರು ತಾಯಿ ಶ್ರೀಮತಿ ಲಕ್ಷ್ಮೀ, ಸಹೋದರಿಯರಾದ ಶ್ರೀಮತಿ ಉಷಾ, ಶ್ರೀಮತಿ ಆಶಾ, ಪತ್ನಿ ಶ್ರೀಮತಿ ಜಯಂತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.



