ಕೃಷ್ಣಪ್ಪ ರಿಂದ ಪೋಲಿಸ್ ದೂರು, ನಿಂದನೆ ಆರೋಪ ಸುಳ್ಳಿನ ಕಂತೆ : ಸಚಿನ್ ರಾಜ್ ಶೆಟ್ಟಿ

0

ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ರು ನಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು ಇಂತಹ ವಿಚಾರಗಳು ನಡೆದಿದ್ರೆ ಪಕ್ಷದ ಹೈಕಮಾಂಡ್ ಗೆ ದೂರು ನೀಡಬಹುದಿತ್ತು. ನಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶ ಮತ್ತು ಪಕ್ಷದ ಚೌಕಟ್ಟಿಗೆ ವಿರುದ್ಧ ನಡೆ ಕೃಷ್ಣಪ್ಪ ರಿಂದ ನಡೆದಿದೆ. ನಂದಕುಮಾರ್ ರಿಗೆ ಟಿಕೆಟ್ ನೀಡಬೇಕೆಂದು ಹೋರಾಡಿದ ತಂಡದಲ್ಲಿ ನಾನು ಮತ್ತು ಭವಾನಿಶಂಕರ ಮೊದಲಿಗರಾಗಿದ್ದೆವು. ಇದನ್ನು ಸಹಿಸದೇ ನಮ್ಮನ್ನು ಸದೆ ಬಡಿಯುವ ಉದ್ದೇಶದಿಂದ. ಈ ರೀತಿ ಸುಳ್ಳು ಹೇಳಿ ಕೇಸು ದಾಖಲು ಮಾಡಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ನ್ಯಾಯ ನಮ್ಮ ಪರವಾಗಿ ಒಲಿಯಲಿದೆ ಎಂದು ಉಚ್ಚಾಟಿತ ಕಾಂಗ್ರೆಸ್ ನಾಯಕ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.