ನೇಣು ಬಿಗಿದು ಯುವಕ ಆತ್ಮಹತ್ಯೆ

0

ನಾಗಪಟ್ಟಣ ಬಳಿ ನಡೆದ ಘಟನೆ

ಆಲೆಟ್ಟಿ ಗ್ರಾಮದ ನಾಗಪಟ್ಟಣ ಸಿ.ಆರ್.ಸಿ ಕಾಲನಿಯ ಯವಕನೊಬ್ಬ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ನಾಗಪಟ್ಟಣ ಸಿ .ಆರ್ .ಸಿ ಕಾಲನಿ ನಿವಾಸಿ ಮಣಿಕಂಠ ಎಂಬ ಯುವಕ ಕಳೆದ ರಾತ್ರಿ ವೇಳೆಯಲ್ಲಿ ಬಂದು ತನ್ನ ಮನೆಯ ಮುಂದೆ ಬೈಕ್ ನಿಲ್ಲಿಸಿ ತಾಯಿಯ ಸೀರೆಯನ್ನು ತೆಗೆದುಕೊಂಡು ಹೋಗಿ ಪಕ್ಕದಲ್ಲಿ ಇರುವ ಅಂಗನವಾಡಿ ಶಾಲೆ ಬಳಿಯ ಮಾವಿನ ಮರಕ್ಕೆ ನೇಣು ಹಾಕಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.


ಆತ್ಮ ಹತ್ಯೆ ಮಾಡಿಕೊಂಡ ಯುವಕ ಮಣಿಕಂಠ ನಾಗಪಟ್ಟಣ ರವರು ಕಳೆದ 5 ವರ್ಷ ಗಳಿಂದ ಗೇರು ಬೀಜ ವ್ಯವಹಾರ ನಡೆಸುತ್ತಿರುವ ಜಾಲ್ಸೂರಿನ ಕದಿಕಡ್ಕದ ಪ್ರವೀಣ್ ಎಂಬವರ ಜತೆ ಚಾಲಕ ವೃತ್ತಿ ನಿರ್ವಹಿಸುತ್ತಿದ್ದು ಅವರ ಮನೆಯಲ್ಲಿಯೇ ಉಳಿದುಕೊಂಡಿರುತ್ತಿದ್ದರು. ಎಂದಿನಂತೆ ಊಟ ಮಾಡಿದ ಬಳಿಕ ಎಲ್ಲರೂ ನಿದ್ರೆಗೆ ಜಾರಿದ ನಂತರ ಮಣಿಕಂಠ ಯಾರಲ್ಲಿಯೂ ಹೇಳದೆ ತನ್ನ ಬೈಕಿನಲ್ಲಿ ಸ್ವಂತ ಮನೆ ನಾಗಪಟ್ಟಣಕ್ಕೆ ಜೂ.19 ರ ರಾತ್ರಿ ಬಂದಿದ್ದಾನೆ. ಮನೆಯ ಗೇಟಿನ ಮುಂದೆ ಬೈಕ್ ನಿಲ್ಲಿಸಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾದಲ್ಲಿ ಮೊಬೈಲ್ ಇಟ್ಟು ಅಲ್ಲೇ ಪಕ್ಕದಲ್ಲಿ ನೇಕೆಯಲ್ಲಿದ್ದ ತನ್ನ ತಾಯಿಯ ಸೀರೆಯೊಂದನ್ನು ತೆಗೆದುಕೊಂಡು ಹೋಗಿ ನೇಣು ಹಾಕಿಕೊಂಡಿದ್ದಾರೆ. ಬೈಕಿ ನಿಲ್ಲಿಸಿದ ಜಾಗದಲ್ಲಿ ಚಪ್ಪಲಿ ಹಾಗೂ ಬೈಕಿನ ಕೀ ಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.


ಮಣಿಕಂಠ ರವರ ತಂದೆ ಕೆ‌ಎಫ್.ಡಿ.ಸಿ ನಿವೃತ್ತ ಉದ್ಯೋಗಿ ಆರ್ ಕುಮಾರ್ , ತಾಯಿ ಪದ್ಮಾವತಿ, ಸಹೋದರ ಬಾಲಕೃಷ್ಣ ನಾಗಪಟ್ಟಣ, ಅತ್ತಿಗೆ ಗೀತಾ, ಚಿಕ್ಕಪ್ಪ ಮುತ್ತಯ್ಯ, ಸಹೋದರರಾದ ಭರತ್ ,ಬಾಲಸುಬ್ರಹ್ಮಣ್ಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.


ಮೃತ ಯುವಕ ಓರ್ವ ಉತ್ತಮ ಕಬಡ್ಡಿ ಹಾಗೂ ಫುಟ್ ಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಆತ್ಮ ಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಸುಳ್ಯ ಪೋಲಿಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿರುತ್ತಾರೆ.