ಗಾಂಧಿನಗರದಲ್ಲಿ ಬೈಕ್ – ಕಾರು ಡಿಕ್ಕಿ : ಬೈಕ್ ಸವಾರರಿಗೆ ಗಾಯ

0


ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಸುಳ್ಯ ಗಾಂಧಿನಗರ ಅರಣ್ಯ ಇಲಾಖೆ ಕಚೇರಿ ಮುಂಭಾಗ ಇಂದು ಬೆಳಿಗ್ಗೆ ಸಂಭವಿಸಿದೆ.
ಎರಡು ವಾಹನಗಳು ಪೆರಾಜೆ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದು ಬೈಕಿನ ಹಿಂಭಾಗಕ್ಕೆ ಕಾರು ಡಿಕ್ಕಿ ಆಗಿದೆ ಎನ್ನಲಾಗಿದೆ. ಕಾರು ನಾವೂರು ನಿವಾಸಿಗಳದ್ದಾಗಿದ್ದು, ಗಾಯಗೊಂಡ ಬೈಕಿನ ಸವಾರ ಯಾರೆಂದು ತಿಳಿದು ಬಂದಿಲ್ಲ.


ಘಟನಾ ಸ್ಥಳದ ಪರಿಸರದಲ್ಲಿದ್ದವರು ಗಾಯಗೊಂಡ ಬೈಕ್ ಸವಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆಂದು ತಿಳಿದುಬಂದಿದೆ.