ಕಲ್ಚೆರ್ಪೆಯಲ್ಲಿ ನ.ಪಂ. ಜಾಗದಲ್ಲಿದ್ದ ಮರ ಬಿದ್ದು ಕೃಷಿ‌ ಹಾನಿ

0

ಸಂಚಾರಕ್ಕೆ ಅಡಚಣೆ-ವಿದ್ಯುತ್ ಸಂಪರ್ಕ ಕಡಿತ

ಸುಳ್ಯ ನಗರದ ತ್ಯಾಜ್ಯ ವಿಲೇ ಮಾಡಲಾಗುತ್ತಿದ್ದ ಜಾಗದಲ್ಲಿದ್ದ ಬೃಹದಾಕಾರದ ‌ಮರವೊಂದು ಪಕ್ಕದ ಜಾಗಕ್ಕೆ ಬಿದ್ದು ಕೃಷಿ ಹಾನಿಗೊಂಡಿರುವುದಾಗಿ ತಿಳಿದು ಬಂದಿದೆ.

ನಿನ್ನೆ ಮರ ಮಗುಚಿದ್ದು ವೆಂಕಟೇಶ್ ಎಂಬವರ ಜಾಗಕ್ಕೆ ಬಿದ್ದಿದೆ.‌ ಕೆಲವು ಅಡಿಕೆ ಮರಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.

ಮರ ಬೀಳುವ ಸಂದರ್ಭದಲ್ಲಿ ವಿದ್ಯುತ್ ಲೈನಿನ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ಸಂಪರ್ಕ ಕಡಿತಗೊಂಡಿದೆ.