ಸುಬ್ರಹ್ಮಣ್ಯ : ಮೋರಿಗೆ ಬಿದ್ದು ಒದ್ದಾಡುತ್ತಿದ್ದ ದನವನ್ನು ರಕ್ಷಿಸಿದ ರವಿ ಕಕ್ಕೆಪದವು ತಂಡ

0


ಮೋರಿಯ ಕೆಳಗೆ ಕಣಿಗೆ ಬಿದ್ದು ಒದ್ದಾಡುತ್ತಿದ್ದ ದನವನ್ನು ಸುಬ್ರಹ್ಮಣ್ಯದ ರವಿ ಕಕ್ಕೆಪದವು ಅವರ ತಂಡವು ರಕ್ಷಿಸಿದ ಘಟನೆಯೊಂದು ನಡೆದಿದೆ.
ಇಂದು ಬೆಳಗಿನ ಹೊತ್ತು ಸುಬ್ರಹ್ಮಣ್ಯದ ಇಂಜಾಡಿ ಸಮೀಪದ ಎರಡನೇ ತಿರುವಿನಲ್ಲಿ ಜರ್ಸಿ ದನವೊಂದು ಮೋರಿಯ ಕೆಳಗೆ ಬಿದ್ದು ಒದ್ದಾಡುತ್ತಿತ್ತು . ದನದ ತಲೆಯು ಮೋರಿಯ ಕೆಳಗೆ ಸಿಕ್ಕಿ, ಮೇಲಕ್ಕೆಳಲಾರದ ಪರಿಸ್ಥಿತಿಯಲ್ಲಿ ಇತ್ತು. ಇದನ್ನು ಕಂಡ ಸುಬ್ರಹ್ಮಣ್ಯದ ಸಮಾಜ ಸೇವಕ ಡಾ. ರವಿ ಕಕ್ಕೆ ಪದವು ಮತ್ತಿತರರು ಸೇರಿ ಅದನ್ನು ಮೇಲಕ್ಕೆತ್ತಿ ರಕ್ಷಿಸಿದರು.


ರವಿಕಕ್ಕೆಪದವು ಅವರು ತನ್ನ 15 ಕ್ಕೂ ಮಿಕ್ಕಿ ಕಾರ್ಯಕರ್ತರೊಂದಿಗೆ ಬಂದು ದನವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಇವರೊಂದಿಗೆ ಸ್ಥಳೀಯರು, ಕುಕ್ಕೆ ಮೆಟ್ಸ್ ನ ಸದಸ್ಯರು ಕೂಡ ಭಾಗಿಯಾಗಿದ್ದರು.

ಜು.೧೦ ರಂದು ಸುಬ್ರಹ್ಮಣ್ಯದ ಮೊಂಟಿ ಕಂಫರ್ಟ್ ಮತ್ತು ಪಶು ಆಸ್ಪತ್ರೆ ಕಪೌಂಡ್ ಮಧ್ಯೆ ಕೂಡಾ ಜಾನುವಾರೊಂದು ಸಿಕ್ಕಿಹಾಕಿಕೊಂಡಿತ್ತು. ಅದನ್ನು ಕೂಡಾ ರವಿ ಕಕ್ಕೆಪದವು ತಂಡ ಮೇಲಕ್ಕೆತ್ತಿತ್ತು.