ಜಾಲ್ಸೂರಿನಲ್ಲಿ ಮತ್ತೆ ಕಳ್ಳತನ ಪ್ರಕರಣ : ಗೂಡಂಗಡಿಯಿಂದ ಕಳವು

0

ಜಾಲ್ಸೂರಿನಲ್ಲಿ ಇತ್ತೀಚಿನ ಕೆಲ ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜು.20ರಂದು ರಾತ್ರಿ
ಗೂಡಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಸಂಭವಿಸಿದೆ.

ಜಾಲ್ಸೂರಿನ ಗೋಳಿಕಟ್ಟೆ ಬಳಿಯಿರುವ ನಾರಾಯಣ ಭಟ್ ಅವರ ಗೂಡಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು , ಅಂಗಡಿಯಲ್ಲಿ ಮಾರಾಟಕ್ಕಿರಿಸಿದ್ದ ಜ್ಯೂಸ್ ಬಾಟ್ಲಿಗಳು, ಬಿಸ್ಕೇಟ್ ಪ್ಯಾಕೇಟ್, ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ.
ಜಾಲ್ಸೂರು ಹಾಗೂ ಕನಕಮಜಲು ಪರಿಸರದಲ್ಲಿ ಇತ್ತೀಚಿನ ಕೆಲ ದಿನಗಳಿಂದ ಮೇಲಿಂದ ಮೇಲೆ ಅಂಗಡಿಗಳಿಂದ ಕಳ್ಳತನ , ಮನೆಯಿಂದ ನಗದು ಕಳವು, ಚಿನ್ನಾಭರಣ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಈ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.