ಗುತ್ತಿಗಾರು : ತರಕಾರಿ ಅಂಗಡಿಯಿಂದ ಕಳ್ಳತನ, ಪೊಲೀಸ್ ದೂರು ದಾಖಲು

0

ಗುತ್ತಿಗಾರು ಪೇಟೆಯ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿರುವ ಚಿನ್ನಪ್ಪ ಪುಲ್ಲಡ್ಕ ಎಂಬುವವರ ತರಕಾರಿ ಅಂಗಡಿಯಿಂದ ಕಳ್ಳತನವಾದ ಘಟನೆ ವರದಿಯಾಗಿದೆ.
ಅಂಗಡಿ ಮಾಲಕ ಕಳೆದ ಒಂದುವರೆ ತಿಂಗಳ ಹಿಂದೆ ಬೈಕ್ ಅವಘಡದಿಂದ ಗಾಯಗೊಂಡು ಅಂಗಡಿ ಬಂದ್ ಮಾಡಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು ಎನ್ನಲಾಗಿದೆ.
ಜುಲೈ 25ರಂದು ಸಂಜೆ ಅವರು ತಮ್ಮ ಅಂಗಡಿಗೆ ಹೋಗಿದ್ದಾಗ ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ಅವರಿಗೆ ತಿಳಿದು ಬಂದಿದೆ.

ಕೂಡಲೇ ಅವರು ಕಳ್ಳತನ ಆದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ದೂರಿನಲ್ಲಿ ’ನನಗೆ ಒಂದುವರೆ ತಿಂಗಳ ಹಿಂದೆ ಬೈಕ್ ಅಪಘಾತವಾಗಿ ಅಂಗಡಿ ಬಂದ್ ಮಾಡಲಾಗಿದ್ದು ದಿನಾಂಕ:25-೦7-2023 ರಂದು ಸಂಜೆ ಸುಮಾರು ೬.೩೦ ಗಂಟೆಗೆ ನನ್ನ ತರಕಾರಿ ಅಂಗಡಿಗೆ ಹೋಗಿ ನೋಡಲಾಗಿ ಅಂಗಡಿಯ ಹಿಂದಿನ ಕಂಗಿನ ಸಲಾಕೆಯನ್ನು ಒಡೆದು ಯಾರೋ ಕಳ್ಳರು ಒಳ ನುಗ್ಗಿ ಒಂದು ಅಳತೆ ಸ್ಕೇಲ್, ರೂ.5೦೦/- ಹಣ, ಅಂಗಡಿ ಲೈಸೆನ್ಸ್, ದಾಖಲೆ ಪತ್ರಗಳು, ಬಿಸ್ಕೇಟ್ ಇತ್ಯಾದಿ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಅಂದಾಜು ಮೌಲ್ಯ 7೦೦೦/- ರೂಗಳು. ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಕಲಂ: ೪೫೪, ೪೫೭, ೩೮೦ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿದುಬಂದಿದೆ.