ಬಿಳಿಯಾರಿನಲ್ಲಿ ನೇಣುಬಿಗಿದು ಯುವಕ ಆತ್ಮಹತ್ಯೆ

0

ಅರಂತೋಡು ಗ್ರಾಮದ ಬಿಳಿ ಯಾರು ದಿ.ಮೂಸಾ – ಸೆಮೀರಾ ದಂಪತಿಗಳ ಪುತ್ರ ಹಂಸೀರ್ (17) ಎಂಬ ಯುವಕ ಮನೆಯೊಳಗೆ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ಹಸೀರ್ ನ ತಾಯಿ ಮತ್ತು ಮನೆಯವರು ಎರ್ನಾಕುಲಂ ಗೆ ಹೋಗಿದ್ದರು. ಮನೆಯಲ್ಲಿ ಈತ ಒಬ್ಬನೆ ಇದ್ದನು. ಸಂಜೆ ಅರಂತೋಡಿನ ತನ್ನ ಅಜ್ಜಿಗೆ ಹೋಗಿ ಮಾತನಾಡಿ ಮನೆಗೆ ಬಂದಿದ್ದ.‌ ರಾತ್ರಿ ತಾಯಿ‌ ಫೋನ್ ಮಾಡಿ ಮಾತನಾಡಿದ್ದರು. ಬಳಿಕ ತಾಯಿ ಕರೆ ಮಾಡಿದಾಗ ಸ್ವೀಕಾರ ಮಾಡಿರಲಿಲ್ಲ. ಪದೇ ಪದೇ ಫೋನ್ ರಿಂಗಾದರೂ ಸ್ವೀಕರಿಸದಿದ್ದ. ಬಳಿಕ ಅರಂತೋಡಿನ ಅಜ್ಜಿ ಮನೆಗೆ ಫೋನ್ ಮಾಡಿ ಹಂಸೀರ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿದರು.‌ ಆತನ ಮಾವ ಬಿಳಿಯಾರಿಗೆ ಬಂದು ನೋಡಿದಾಗ ಈತ ಫ್ಯಾನಿಗೆ ನೇಣು ಹಾಕಿರುವುದು ಕಂಡು‌ ಬಂತು.
ವಿಷಯ ತಿಳಿದು ಎರ್ನಾಕುಲಂ ಗೆ ಹೋದವರು ಸುಳ್ಯಕ್ಕೆ ಬರುತ್ತಿದ್ದಾರೆ.

ಹಂಸೀರ್ ಈ ವರ್ಷ ಐ.ಟಿ.ಐ ವಿದ್ಯಾಭ್ಯಾಸಕ್ಕೆ ಸೇರ್ಪಡೆ ಯಾಗಿದ್ದು ಇಂದಿನಿಂದ ಕಾಲೇಜು ಆರಂಭವಾಗುವುದಿತ್ತು ಎಂದು ತಿಳಿದುಬಂದಿದೆ.