ಕನಕಮಜಲು ಸ್ವರ್ಣ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ

0

ಕನಕ ಮಜಲು ಸ್ವರ್ಣ ಮಹಿಳಾ ಮಂಡಲ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆಗಸ್ಟ್ 6 ರಂದು ಕನಕಮಜಲಿನ ಆತ್ಮರಾಮ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.

ಶ್ರೀಮತಿ ಸುಶೀಲಾ ಮಘೇಶ್ವರ್ ಕಾರಿಂಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಕುಸುಮಾ ಶೇಷಪ್ಪ ಗೌಡ ಅಡ್ಕಾರ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ಯಾಮಲಾ ವಾಸುದೇವ ಪೆರುಂಬಾರು, ಗೌರವಾಧ್ಯಕ್ಷರಾಗಿ ಶ್ರೀಮತಿ ಸುಶೀಲಾ ಮಘೇಶ್ವರ್ ಕಾರಿಂಜ, ಉಪಾಧ್ಯಕ್ಷರಾಗಿ ಶ್ರೀಮತಿ ವಿನುತಾ ಸಾರಕೂಟೇಲು, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಲಕ್ಷ್ಮಿ ರವಿಚಂದ್ರ ಕನ್ನಡ್ಕಮೂಲೆ, ಸದಸ್ಯರುಗಳಾಗಿ ಶ್ರೀಮತಿ ಕವಿತಾ ಪೆರುಂಬಾರು, ಶ್ರೀಮತಿ ಪದ್ಮಾವತಿ ಬುಡ್ಲೆಗುತ್ತು, ಶ್ರೀಮತಿ ನಳಿನಿ ಪಲ್ಲತ್ತಡ್ಕ, ಶ್ರೀಮತಿ ಗೀತಾ ಶ್ರೀಧರ ಅಡ್ಕಾರ್ ಅವರನ್ನು ಆಯ್ಕೆ ಮಾಡಲಾಯಿತು. ಹಾಗೂ ಗೌರವ ಸಲಹಾ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.