ಆ.24 : ಬೆಳ್ಳಾರೆಯಲ್ಲಿ ವಸಂತ ಆರ್ಕೇಡ್ ನ ಉದ್ಘಾಟನೆ

0

ಧನ್ವಂತರಿ ಕ್ಲಿನಿಕ್ ಮತ್ತು ಮೆಡಿಕಲ್ಸ್ ಸ್ಥಳಾಂತರಗೊಂಡು ಶುಭಾರಂಭ

ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾದ ವಸಂತ ಆರ್ಕೇಡ್ ನ ಉದ್ಘಾಟನೆ ಹಾಗೂ ಹೆಗ್ಡೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧನ್ವಂತರಿ ಕ್ಲಿನಿಕ್ ಮತ್ತು ಮೆಡಿಕಲ್ಸ್ ಸ್ಥಳಾಂತರಗೊಂಡು ಶುಭಾರಂಭ ಆ.24 ರಂದು ನಡೆಯಲಿದೆ.
ವಸಂತ ಆರ್ಕೇಡನ್ನು ಕುಲ ಪುರೋಹಿತರಾದ ಶಿವಪ್ರಸಾದ್ ಭಟ್ ಚೂಂತಾರು ಉದ್ಘಾಟಿಸಲಿದ್ದಾರೆ.


ಧನ್ವಂತರಿ ಕ್ಲಿನಿಕನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಉದ್ಘಾಟಿಸಲಿದ್ದಾರೆ.
ಧನ್ವಂತರಿ ಮೆಡಿಕಲ್ಸ್ ನ್ನು ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಣ್ಣಾ ವಿನಯಚಂದ್ರರವರು ಉದ್ಘಾಟಿಸಲಿದ್ದಾರೆ.


ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ರೈ ಚಾವಡಿಬಾಗಿಲು, ದಿನೇಶ್ಚಂದ್ರ ಬಿ.ಹೆಗ್ಡೆ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಡಾ.ಕಾರ್ತಿಕ್ ರವರು ತಿಳಿಸಿದ್ದಾರೆ.