ಕಲ್ಲೇರಿತ್ತಾಯ ದೈವಸ್ಥಾನ ಕಾಯರದಲ್ಲಿ ಶ್ರಮದಾನ

0

ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಸುಳ್ಯ ತಾಲ್ಲೂಕು ಇದರ ಶ್ರದ್ದಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದಡಿಯಲ್ಲಿ ಬೆಳ್ಳಾರೆ ವಲಯದ ಮುಪ್ಪೆರಿಯಾ ಒಕ್ಕೂಟದ ವತಿಯಿಂದ ಕಲ್ಲೇರಿತ್ತಾಯ ದೈವಸ್ಥಾನ ಕಾಯರ ಇಲ್ಲಿ ಶ್ರಮ ದಾನವು ಆ 13ರಂದು ನಡೆಯಿತು.

ಈ ಸಂಧರ್ಭದಲ್ಲಿ ಒಕ್ಕೂಟ ಅಧ್ಯಕ್ಷ ರಾದ ಶ್ರೀಮತಿ ಪ್ರೇಮಲತಾ, ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ, ಸೇವಾಪ್ರತಿನಿಧಿ ಶ್ರೀಮತಿ ಬೇಬಿ ಶಾಲಿನಿ, ಯುವ ಸೇವಾ ಸಂಘ ಮುಪ್ಪೆರಿಯಾ ಇದರ ಅಧ್ಯಕ್ಷರಾದ ಜನಾರ್ಧನ ಕೊಲೆಂಜಿಕೋಡಿ, ರಾಮಪ್ರಸಾದ್ ಕಾಂಚೋಡು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.