ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮಟ್ಟದ ಭಜನಾ ಸಮಿತಿ ರಚನೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮಟ್ಟದ ಭಜನಾ ಸಮಿತಿ ರಚನೆ ಮಾಡುವ ಬಗ್ಗೆ ಆ.13ರಂದು ಸುಳ್ಯದ ಯೋಜನಾ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಯಿತು.

ಸಭಾಧ್ಯಕ್ಷತೆಯನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸುಳ್ಯ ತಾಲೂಕಿನ ಅಧ್ಯಕ್ಷರಾದ ಯತೀಶ್ ರೈ ದುಗಲಡ್ಕ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ಪುತ್ಯ ರವರು ಆಗಮಿಸಿ ವಲಯ ಮಟ್ಟದ ಭಜನಾ ಸಮಿತಿಯನ್ನು ರಚಿಸುವ ಬಗ್ಗೆ ಮಾಹಿತಿ ನೀಡಿ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ವಲಯದ ಮೇಲ್ವಿಚಾರಕರಾದ ಶ್ರೀಮತಿ ಪ್ರಿಯ ಹಾಗೂ ಸುಳ್ಯ ವಲಯದ ಸೇವಾ ಪ್ರತಿನಿಧಿಗಳು ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಳ್ಯ ವಲಯ ಮಟ್ಟದ ಭಜನಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಾಲಚಂದ್ರ ಪೀಟಿ ಹಲ್ದಾಡ್ಕ ಸರಳಿ ಕುಂಜರವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ವಿಜಯ ಸರಳಿ ಕುಂಜ, ವಾಸುದೇವ ಆಚಾರ್ಯ, ನಾಗವೇಣಿಕೆ, ವೇದಾವತಿ, ಸವಿತಾ, ಪಾರ್ವತಿಯವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಸುಹಾನ್ ರೈ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಗಾಂಧಿನಗರ ಸೇವಾ ಪ್ರತಿನಿಧಿಯದ ಸೌಜನ್ಯ ರವರು ನೆರವೇರಿಸಿದರು. ಪರಿವಾರಕಾನ ಸೇವಾ ಪ್ರತಿನಿಧಿ ಸುರೇಶ್ ರವರು ಸ್ವಾಗತಿಸಿ, ಕೇರ್ಪಳ ಸೇವಾ ಪ್ರತಿನಿಧಿ ಪ್ರೇಮರವರು ವಂದಿಸಿದರು