ಗೂನಡ್ಕ: ಶ್ರೀ ಶಾರದ ಅನುದಾನಿತ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ದಾನಿಗಳು ನೀಡಿದ ವಿವಿಧ ಕೊಡುಗೆಗಳ ಅನಾವರಣ

0

ಸಂಪಾಜೆಯ ಗೂನಡ್ಕ ಶ್ರೀ ಶಾರದ ಅನುದಾನಿತ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ದಾನಿಗಳು ನೀಡಿದ ವಿವಿಧ ಕೊಡುಗೆಗಳ ಅನಾವರಣ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದ ವಿದ್ಯಾ ಸಂಘ ಇದರ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆವಹಿಸಿದ್ದರು.ಧ್ವಜಾರೋಹಣವನ್ನು ಶಾಲಾ ಸಂಚಾಲಕ ಎಸ್.ಪಿ ಲೋಕನಾಥ ನೆರವೇರಿಸಿದರು.

ದಾಸ್ತಾನು ಕೊ ಠಡಿ ಯನ್ನು ವರ್ತಕರ ಸಂಘದ ಅಧ್ಯಕ್ಷ ಯು.ಬಿ ಚಕ್ರಪ್ರಾಣಿ, ಮುಖ್ಯಗುರುಗಳ ಕೊಠಡಿಯ ಟೈಲ್ಸ್ ಅಳವಡಿಕೆಯ ಉದ್ಘಾಟನೆಯನ್ನು ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ನೆರವೇರಿಸಿದರು.

ಮುಖ್ಯ ಅತಿಥಿ ಯಾಗಿ ಸಂಪಾಜೆ ವಲಯ ಉಪ ಅರಣ್ಯಾಧಿಕಾರಿ ಚಂದ್ರು ಬಿ.ಜಿ.,ಮಹಮ್ಮದ್ ಕುಂಞಿ, ಉಮ್ಮರ್ ಬೀಜದಕಟ್ಟೆ,ಮುಖ್ಯ ಗುರು ಹನುಮಂತಪ್ಪ,ಇಬ್ರಾಹಿಂ ಮೈಲ್ ಕಲ್,ದಾಮೋದರ ಮಾಸ್ತರ್,ಜಾಫರ್ ಸಾಧಿಕ್,ಚಿದಾನಂದ ಮಾಸ್ತರ್,ಸನತ್ ಗೂನಡ್ಕ,ಅಬೂಬಕರ್ ಸಿದ್ದಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿ ವೃಂದ, ಊರ ವಿದ್ಯಾಭಿಮಾನಿಗಳು ಪಾಲ್ಗೊಂಡಿದರು.